ಮಗಳ ಮದ್ವೆ ತಪ್ಪಿಸಲು ಭಾವಿ ಅಳಿಯನ ತಂದೆಯನ್ನೇ ಕೊಂದ ತಾಯಿ! | ಜನತಾ ನ್ಯೂಸ್
ಮೈಸೂರು : ಮಗಳ ಮದುವೆಯನ್ನೇ ನಿಲ್ಲಿಸಲು ಭಾವಿ ಅಳಿಯನ ತಂದೆಯನ್ನೇ ಕೊಂದು ಜೈಲು ಸೇರಿದ ಘಟನೆ ನಂಜನಗೂಡು ತಾಲೂಕಿನ ಹುಲ್ಲಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ಹುಲ್ಲಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗೌಡರಹುಂಡಿ ಗ್ರಾಮದ ಶಿವರಾಜಪ್ಪ ಕೊಲೆಯಾದ ದುರ್ದೈವಿ. ಈತನ ಕೊಲೆ ಪ್ರಕರಣದಲ್ಲಿ ಶರತ್ ಕುಮಾರ್, ಮಧು, ಹಾಗೂ ಮಲ್ಲಿಗೆಯಮ್ಮ ಬಂಧಿತ ಆರೋಪಿಗಳು.
ಮಲ್ಲಿಗೆಯಮ್ಮ ಅವಳ ಮಗಳನ್ನು ಕೊಲೆಯಾದ ಶಿವರಾಜಪ್ಪ ಮಗ ಪವನ್ ಕುಮಾರ್ ಪ್ರೀತಿಸುತ್ತಿದ್ದು ಮದುವೆ ನಿಶ್ಚಿತವಾಗಿತ್ತು. ಆದರೆ ಈ ಮದುವೆ ತಾಯಿ ಮಲ್ಲಿಗೆಯಮ್ಮಗೆ ಇಷ್ಟವಿರಲಿಲ್ಲ.
ಶರತ್ ಕುಮಾರ್ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಮಲ್ಲಿಗೆಯಮ್ಮ ಹೇಗಾದರೂ ಮಾಡಿ ಮದುವೆ ನಿಲ್ಲಿಸು ಎಂದು ಆತನ ಮೇಲೆ ಒತ್ತಡ ಹೇರಿದರು.
ಪ್ರೇಯಸಿಯ ಮಾತು ಕೇಳಿದ ಶರತ್ಕುಮಾರ್, ಮಧು ಎಂಬಾತನ ಸಹಾಯ ಪಡೆದು ಮೇ 28ರಂದು ಶಿವರಾಜಪ್ಪನನ್ನು ಕೊಂದು ನಾಲೆಗೆ ಎಸೆದಿದ್ದರು. ಮೃತದೇಹ ಜೂ.2ರಂದು ರಾಮಪುರ ನಾಲೆಯಲ್ಲಿ ಪತ್ತೆಯಾಗಿತ್ತು.
ಈ ಸಂಬಂಧ ಮಗ ಪವನ್ ಕುಮಾರ್ ತಂದೆಯನ್ನು ಕೊಲೆ ಮಾಡಿರುವ ಶಂಕೆಯಲ್ಲಿ ದೂರು ದಾಖಲಿಸಿದ್ದರು.