ಸೆಲ್ಫಿ ತೆಗೆಯಲು ತೆರಳಿದ್ದ ಕೊಪ್ಪಳದ ಯುವಕನ ಶವ ಸಮುದ್ರ ತೀರದಲ್ಲಿ ಪತ್ತೆ | ಜನತಾ ನ್ಯೂಸ್
ಕುಮಟಾ : ಸಮುದ್ರ ದಡದ ಬಂಡೆಮೇಲೆ ಸೆಲ್ಫಿ ತೆಗೆಯಲು ತೆರಳಿದ್ದ ಕೊಪ್ಪಳ ಮೂಲದ ಯುವಕ ಸಮುದ್ರಕ್ಕೆ ಬಿದ್ದು ಜೀವ ಕಳೆದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನಡೆದಿದೆ.
ನಿನ್ನೆ ಗುರುವಾರ ಮಧ್ಯಾಹ್ನ ಕುಮಟಾದ ಹೊನ್ನಳ್ಳಿ ಬೀಚ್ನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರು ಪಾಲಾದ ಯುವಕನ ಮೃತದೇಹ ಇಂದು ಶುಕ್ರವಾರ ಪತ್ತೆಯಾಗಿದೆ.
ಮೃತ ದುದೈವಿಯನ್ನು ಅಭೀಷೇಕ ಹನುಮಂತ ಬೋಯ್(25) ಎಂದು ಗುರುತಿಸಲಾಗಿದೆ. ಮೃತ ಯುವಕ ಕೊಪ್ಪಳದ ಹೊಸಲಿಂಗಪುರದ ನಿವಾಸಿಯಾಗಿದ್ದು, ತನ್ನ ಅಕ್ಕನ ಮನೆಗೆ ಬಂದಿದ್ದು, ಲಾಕ್ಡೌನ್ ಆದ ಕಾರಣ ಊರಿಗೆ ತೆರಳಲಾಗದೆ ಅಕ್ಕನ ಮನೆಯಲ್ಲಿ ಉಳಿದುಕೊಂಡಿದ್ದ, ಎನ್ನಲಾಗಿದೆ.
ಗುರುವಾರ ಮದ್ಯಾಹ್ನ ತನ್ನ ಬ್ಯಾಂಕ್ ಉದ್ಯೋಗಿ ಅಕ್ಕನಿಗೆ ಬ್ಯಾಂಕಿಗೆ ಡ್ರಾಪ್ ಮಾಡಿ ಬೀಚ್ ಬಳಿ ಹೋಗಿದ್ದ ಇತನು, ಸೆಲ್ಫಿ ತೆಗೆಯುವ ಬರದಲ್ಲಿ ಕಾಲುಜಾರಿ ಸಮುದ್ರಕ್ಕೆ ಬಿದ್ದು ಜೀವ ಕಳೆದುಕೊಂಡಿರಬಹುದು, ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿಸ್ಸು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.