ಕೋವಿಡ್-19 ರಾಜ್ಯಾದ್ಯಂತ 159 ಸಾವು : 8,249 ಹೊಸ ಪ್ರಕರಣ, ಬೆಂಗಳೂರಿನಲ್ಲಿ 1,154 | ಜನತಾ ನ್ಯೂಸ್
ಬೆಂಗಳೂರು : ರಾಜ್ಯಾದ್ಯಂತ ಕೋವಿಡ್-19 ಪ್ರಕರಣಗಳು ಸತತ ಇಳಿಮುಖವಾಗಿದ್ದು ಇಂದು ಶುಕ್ರವಾರ 8,249 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ರಾಜಧಾನಿ ಬೆಂಗಳೂರು ನಗರದಲ್ಲಿ ಪ್ರಕರಣಗಳು ನಿರಂತರವಾಗಿ ಇಳಿಕೆ ಕಂಡುಬರುತ್ತಿದ್ದು, ಇಂದು 1,154 ಸಂಖ್ಯೆ ದಾಖಲಾಗಿದೆ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 159 ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಹಾಗೆಯೆ, ಪ್ರಕರಣಗಳ ಸಂಖ್ಯೆಯಲ್ಲಿ ತುಮಕೂರುನಲ್ಲಿ 576, ಬಳ್ಳಾರಿ 189, ಮೈಸೂರು ನಲ್ಲಿ 817, ದಕ್ಷಿಣ ಕನ್ನಡದಲ್ಲಿ 506, ಹಾಸನದಲ್ಲಿ 733, ಮಂಡ್ಯದಲ್ಲಿ 366, ಉಡುಪಿಯಲ್ಲಿ 215, ಶಿವಮೊಗ್ಗದಲ್ಲಿ 429, ಬೆಳಗಾವಿಯಲ್ಲಿ 436, ಕುಲಬುರಗಿಯಲ್ಲಿ 29, ಧಾರವಾಡದಲ್ಲಿ 217, ವಿಜಯಪುರದಲ್ಲಿ 174, ಚಿಕ್ಕಬಳ್ಳಾಪುರದಲ್ಲಿ 168, ದಾವಣಗೆರೆಯಲ್ಲಿ 260, ಕೋಲಾರದಲ್ಲಿ 179, ಚಾಮರಾಜನಗರದಲ್ಲಿ 162, ಕೊಡಗುನಲ್ಲಿ 189, ಬೀದರ್ ನಲ್ಲಿ 9, ಕೊಪ್ಪಳದಲ್ಲಿ 98, ರಾಮನಗರದಲ್ಲಿ 57 ಹಾಗೂ ಉತ್ತರ ಕನ್ನಡ 311 ಪ್ರಕರಣ ದಾಖಲಾಗಿದೆ.
ಈ ಮೂಲಕ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 27,47,539ಕ್ಕೆ ಏರಿಕೆಯಾಗಿವೆ. ಕಳೆದ 24 ಗಂಟೆಯಲ್ಲಿ 159 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ, ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಕೋವಿಡ್-19 ಚೇತರಿಕೆ ಪ್ರಕರಣಗಳಲ್ಲಿ, ಬೆಂಗಳೂರು ನಗರದಲ್ಲಿ 4,769 ಜನ ಕೋವಿಡ್-19 ನಿಂದ ಗುಣಮುಖರಾಗಿದ್ದು ಸೇರಿದಂತೆ ರಾಜ್ಯಾಧ್ಯಂತ ಇಂದು 14,975 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು 25,11,105 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಸೋಂಕಿನಿಂದ ರಾಜ್ಯಾದ್ಯಂತ ದಾಖಲಾದ 159 ಸಾವುಗಳಲ್ಲಿ, ಬೆಂಗಳೂರು ನಗರದಲ್ಲಿ 48 ಸಾವು ಸಂಭವಿಸಿದೆ ಹಾಗೂ ರಾಜ್ಯಾದ್ಯಂತ ಒಟ್ಟು ಕೋವಿಡ್ ಸಾವಿನ ಸಂಖ್ಯೆ 32,644 ಆಗಿದೆ.