ಪಾಕ್ ಪತ್ರಕರ್ತರಿಗೆ "ಆರ್ಟಿಕಲ್ 370 ಹಿಂತೆಗೆವ" ಕುರಿತು ಆಶ್ವಾಸನೆ ನೀಡಿದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್
ನವದೆಹಲಿ : ಕ್ಲಬ್ಹೌಸ್ ಅಪ್ಲಿಕೇಶನ್ನಲ್ಲಿ ಪಾಕಿಸ್ತಾನ ಮೂಲದ ಪತ್ರಕರ್ತರೊಂದಿಗಿನ ಇತ್ತೀಚಿನ ಸಂಭಾಷಣೆಯಲ್ಲಿ, ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಅವರು ಆರ್ಟಿಕಲ್ 370ಯನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು "ಹಿಂತೆಗೆದುಕೊಳ್ಳುವ" ಕುರಿತು ಆಶ್ವಾಸನೆ ನೀಡಿದ್ದು ಹೊಸ ವಿವಾದಕ್ಕೆ ನಾಂದಿಹಾಡಿದೆ.
ಪ್ರಸ್ತುತ ಜರ್ಮನಿಯಲ್ಲಿ ನೆಲೆಸಿರುವ ಪಾಕಿಸ್ತಾನ ಮೂಲದ ಪತ್ರಕರ್ತ ಶಹಜೇಬ್ ಜಿಲಾನಿ ಅವರ ಪ್ರಶ್ನೆಗೆ ದಿಗ್ವಿಜಯ ಸಿಂಗ್ ಪ್ರತಿಕ್ರಿಯಿಸುತ್ತಿದ್ದರು. ಒಮ್ಮೆ ಈ ಸರ್ಕಾರ ಹೋಗಿ, ಭಾರತ ಪ್ರಧಾನಿ ಮೋದಿಯವರಿಂದ ಬಿಡುಗಡೆ ಹೊಂದಿದಲ್ಲಿ, ಸರ್ಕಾರ ಬದಲಾವಣೆಯಾದರೆ ಕಾಶ್ಮೀರ ವಿಷಯದಲ್ಲಿ ಏನು ಮಾಡಬಹುದು, ಮಾಡಲಾಗುತ್ತದೆ? ಎಂಬ ಪ್ರಶ್ನೆಗೆ ಕಾಂಗ್ರೆಸ್ ಮುಖಂಡ ಉತ್ತರಿಸುತ್ತಿದ್ದಾರೆ.
ಚರ್ಚೆಯಲ್ಲಿ ಈ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಪ್ತರಲ್ಲಿ ಒಬ್ಬರಾದ ದಿಗ್ವಿಜಯ ಸಿಂಗ್, “ಅವರು(ಬಿಜೆಪಿ) 370ನೇ ವಿಧಿಯನ್ನು ಹಿಂತೆಗೆದುಕೊಂಡಾಗ ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಇರಲಿಲ್ಲ, ಅವರು ಎಲ್ಲರನ್ನೂ ಕಂಬಿಯ ಹಿಂದೆ ಹಾಕಿದ್ದರಿಂದ "ಇನ್ಸಾನಿಯತ್" ಇರಲಿಲ್ಲ. ಏತನ್ಮಧ್ಯೆ, "ಕಾಶ್ಮೀರಿಯತ್" ಜಾತ್ಯತೀತತೆಯ ಮೂಲಭೂತ ವಿಷಯ. ಏಕೆಂದರೆ ಮುಸ್ಲಿಂ ಬಹುಸಂಖ್ಯಾತ ರಾಜ್ಯದಲ್ಲಿ ಹಿಂದೂ ರಾಜನಿದ್ದನು ಮತ್ತು ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರು. ವಾಸ್ತವವಾಗಿ, ಕಾಶ್ಮೀರದಲ್ಲಿ ಸರ್ಕಾರಿ ಸೇವೆಗಳಲ್ಲಿ ಮೀಸಲಾತಿಯನ್ನು ಕಾಶ್ಮೀರಿ ಪಂಡಿತರಿಗೆ ನೀಡಲಾಗಿತ್ತು. ಆದ್ದರಿಂದ, 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಮತ್ತು ಜೆ ಅಂಡ್ ಕೆ ರಾಜ್ಯದ ಸ್ಥಾನಮಾನವನ್ನು ಕಡಿಮೆ ಮಾಡುವ ನಿರ್ಧಾರವು ದುಃಖದ ನಿರ್ಧಾರವಾಗಿದೆ. ಮತ್ತು ಕಾಂಗ್ರೆಸ್ ಪಕ್ಷವು ಖಂಡಿತವಾಗಿಯೂ ಈ ವಿಷಯದ ಬಗ್ಗೆ ಗಮನಹರಿಸಬೇಕಾಗುತ್ತದೆ," ಎಂದು ಹೇಳಿದ್ದಾರೆ.
370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು 2019 ರ ಆಗಸ್ಟ್ 5 ರಂದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಸಂಯೋಜಿಸುವ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ.
ಏತನ್ಮಧ್ಯೆ, ಬಿಜೆಪಿ ವಿರೋಧ ಪಕ್ಷದ ನಾಯಕ ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ. ಬಿಜೆಪಿಯ ಮುಖಂಡ ಅಮಿತ್ ಮಾಲ್ವಿಯಾ, "ಪಾಕಿಸ್ತಾನ ಬಯಸಿದ್ದು ಇದನ್ನೇ..." ಎಂದು ಹೇಳಿದ್ದಾರೆ.
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶಾಂಡಿಲ್ಯ ಗಿರಿರಾಜ್ ಸಿಂಗ್ ಆವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, “ಕಾಂಗ್ರೆಸ್ಸಿನ ಮೊದಲ ಪ್ರೀತಿ ಪಾಕಿಸ್ತಾನ. ದಿಗ್ವಿಜಯ್ ಸಿಂಗ್ ಅವರು ರಾಹುಲ್ ಗಾಂಧಿಯವರ ಸಂದೇಶವನ್ನು ಪಾಕಿಸ್ತಾನಕ್ಕೆ ತಲುಪಿಸಿದ್ದಾರೆ. ಕಾಶ್ಮೀರವನ್ನು ಪಡೆಯಲು ಕಾಂಗ್ರೆಸ್ ಪಾಕಿಸ್ತಾನಕ್ಕೆ ಸಹಾಯ ಮಾಡಲಿದೆ”, ಎಂದು ಟೀಕಿಸಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ಭಾರತದ ಚಿತ್ರಣವನ್ನು ನಾಶಮಾಡಲು ಮತ್ತು ಭಾರತೀಯ ಸೇನೆಯನ್ನು ಅಪಹಾಸ್ಯ ಮಾಡಲು ಪಾಕಿಸ್ತಾನ ಮತ್ತು ಕಾಂಗ್ರೆಸ್ ಒಂದೇ ಆಲೋಚನೆಯನ್ನು ಹೊಂದಿವೆ. 370ನೇ ವಿಧಿಗಾಗಿ ದಿಗ್ವಿಜಯ್ ಸಿಂಗ್ ಏನು ಹೇಳಿದ್ದನೋ, ಅದು ಪಾಕಿಸ್ತಾನದ ಅಂತರರಾಷ್ಟ್ರೀಯ ಕಾರ್ಯಸೂಚಿಯಾಗಿದೆ", ಎಂದು ಖಾರವಾಗಿ ಹೇಳಿದ್ದಾರೆ.
भारत की छवि को नष्ट करने और भारतीय सेना का उपहास करने के लिए पाकिस्तान और कांग्रेस का विचार समान है।
— Kiren Rijiju (@KirenRijiju) June 12, 2021
दिग्विजय सिंह ने धारा 370 के लिए जो कहा है वही पाकिस्तान का इंटरनेशनल एजेंडा है। https://t.co/vC7OrgVdjc