ಹಿರಿಯ ನಾಗರಿಕರ ವಿಶೇಷ ಯೋಜನೆಗಾಗಿ ಸಿಎಂ ಯೋಗಿ ಅವರನ್ನು ಶ್ಲಾಘಿಸಿದ ಪ್ರಧಾನಿ ಮೋದಿ | ಜನತಾ ನ್ಯೂಸ್
ನವದೆಹಲಿ : ಉತ್ತರ ಪ್ರದೇಶ ಪ್ರದೇಶದ ರಾಜ್ಯದಲ್ಲಿ ಇತ್ತೀಚೆಗೆ ಪ್ರಾರಂಭಿಸಲಾದ ಹಿರಿಯ ನಾಗರಿಕರಿಗೆ ವಿಶೇಷ ಯೋಜನೆಗಾಗಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಶ್ಲಾಘಿಸಿದ್ದಾರೆ.
ಭಾರತೀಯ ಜನತಾ ಪಕ್ಷ(ಬಿಜೆಪಿ) ಆಡಳಿತರೂಡ ರಾಜ್ಯವಾದ ಉತ್ತರ ಪ್ರದೇಶ ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಸಿದ್ಧವಾಗುವ ಮುನ್ನ ಸಿಎಂ ಯೋಗಿ ವಿರುದ್ಧ ಭಿನ್ನಾಭಿಪ್ರಾಯದ ವರದಿಗಳ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರ ಹೊಗಳಿಕೆಯ ವಿಶೇಷ ಮಾತುಗಳು ಬಂದಿವೆ.
"ತುಂಬಾ ಒಳ್ಳೆಯ ಉಪಕ್ರಮ!" ಎಂದು ಉಲ್ಲೇಖಿಸಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಉ.ಪ್ರ. ರಾಜ್ಯದಲ್ಲಿ ದೂರವಾಣಿಯ ಸಹಾಯವಾಣಿ ಮೂಲಕ ವೃದ್ಧರಿಗೆ ಆರೋಗ್ಯ ಮತ್ತು ಕಾನೂನು ನೆರವು ನೀಡುವ "ಎಲ್ಡರ್ಲೈನ್" ಯೋಜನೆಯ ಕುರಿತಾದ ವರದಿಯನ್ನು ಶ್ಲಾಘಿಸಿದ್ದಾರೆ.
ಚುನಾವಣೆಗೂ ಮುನ್ನ ರಾಜ್ಯದಲ್ಲಿ ಎದ್ದಿರುವ ಸಂಪುಟ ಹಾಗೂ ನಾಯಕತ್ವದ ಬದಲಾವಣೆ ಕುರಿತಾದ ಕಸರತ್ತುಗಳ ಮಧ್ಯೆ ಕಳೆದ ವಾರ ಸಿಎಂ ಯೋಗಿ ನವದೆಹಲಿಗೆ ತೆರಳಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆಪಿ.ನಡ್ದಾ ಸೇರಿದಂತೆ ಇತರೆ ನಾಯಕರನ್ನು ಭೇಟಿಮಾಡಿದ್ದಾರೆ.