ಹಾಸನದಲ್ಲಿ ಮಚ್ಚಿನಿಂದ ಕೊಚ್ಚಿ ಪತ್ನಿ, ಅತ್ತೆ ಹತ್ಯೆ! | ಜನತಾ ನ್ಯೂಸ್
ಹಾಸನ : ಹಾಸನದಲ್ಲಿ ಜೋಡಿ ಕೊಲೆ ನಡೆದಿದ್ದು, ಪತ್ನಿ ಮತ್ತ ಅತ್ತೆಯನ್ನು ಕೌಟುಂಬಿಕ ಕಲಹ ಹಿನ್ನೆಲೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ರಂಗಾಪುರ ಗ್ರಾಮದಲ್ಲಿ ಸಂಭವಿಸಿದೆ.
ಪತ್ನಿ ಮಂಜುಳಾ (30) ಹಾಗೂ ಮಂಜುಳಾ ತಾಯಿ ಭಾರತಿ (55) ರನ್ನು ಪತಿ ಶ್ರೀಧರ್ ಕೊಲೆ ಮಾಡಿದ್ದಾನೆ.
ನಿನ್ನೆ ಜಮೀನಿನ ಬಳಿ ಕೆಲಸ ಮಾಡುತ್ತಿದ್ದ ವೇಳೆ ಗಲಾಟೆಯಾಗಿದೆ. ಆಗ ಶ್ರೀಧರ್ ಎಂಬಾತ ತನ್ನ ಹೆಂಡತಿ ಹಾಗು ಅತ್ತೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
English summary :Hasan