ಬೇಟೆಗೆ ಹೋದಾಗ ಸ್ನೇಹಿತನ ಗನ್ನಿಂದ ಮಿಸ್ಫೈರ್, ಬೇಟೆಯಾಡಲು ತೆರಳಿದ್ದ ವ್ಯಕ್ತಿಗೆ ಗುಂಡೇಟು : ಕೊಲೆ ಶಂಕೆ? | ಜನತಾ ನ್ಯೂಸ್
ಕೋಲಾರ : ಬೇಟೆಗೆ ಹೋದಾಗ ಗನ್ ಮಿಸ್ಫೈರ್ ಆಗಿ ವ್ಯಕ್ತಿ ಸಾವನ್ನಪ್ಪಿರೋ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೀಗೆಹಳ್ಳಿ ಗ್ರಾಮದ ಬಳಿ ಇರುವ ಮಾವಿನ ತೋಪಿನಲ್ಲಿ ಈ ಘಟನೆ ಜರುಗಿದೆ.
ಶಂಕರಪ್ಪ (55) ಎಂಬಾತ ಮೃತದುರ್ದೈವಿಯಾಗಿದ್ದಾರೆ.. ಕಳೆದ ರಾತ್ರಿ ನಾಲ್ವರು ಸ್ನೇಹಿತರು ಬೇಟೆಗೆಂದು ಹೋದಾಗ ಈ ಘಟನೆ ನಡೆದಿದೆ.
ಪರವಾನಿಗೆ ಹೊಂದಿದ್ದ ಬಂದೂಕಿನಲ್ಲಿ ಕಾಡು ಪ್ರಾಣಿಗಳನ್ನ ಬೇಟೆಯಾಡಲು, ಗ್ರಾಮದ ಕೋದಂಡಪ್ಪ, ಚೌಡಪ್ಪ, ಶ್ರೀನಿವಾಸಗೌಡ ಎಂಬುವರ ಜತೆಗೆ ಮೃತ ಶಂಕರಪ್ಪ ತೆರಳಿದ್ದರು. ಈ ವೇಳೆ ಶಂಕರಪ್ಪನ ಹಣೆಗೆ ಬಂದೂಕಿನ ಗುಂಡು ತಗುಲಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಸಂಬಂಧ ಬೇಟೆಗೆ ಹೋಗಿದ್ದ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಬೇಟೆಯಾಡುವ ವೇಳೆ ಜೊತೆಯಲ್ಲಿದ್ದವರು ಶಂಕರಪ್ಪನ ಹಣೆಗೆ ಗುರಿಯಿಟ್ಟು ಗುಂಡು ಹೊಡೆದು ಕೊಲೆ ಮಾಡಿದ್ದಾರೆಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಈ ವೇಳೆ ಗನ್ ಲೈಸೆನ್ಸ್ ಹೊಂದಿದ್ದ ಕೋದಂಡಪ್ಪನ ಗನ್ನಿಂದ ಮಿಸ್ಫೈರ್ ಆಗಿ ಶಂಕರ್ಗೆ ಗುಂಡೇಟು ತಾಗಿ ಸಾವನ್ನಪ್ಪಿದ್ದಾರೆ ಎಂದು ಸ್ನೇಹಿತರು ಹೇಳಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.