ನಮ್ಮಲ್ಲಿ ಹೊರಗಿನವರು ಯಾರೂ ಇಲ್ಲ, ಎಲ್ಲರೂ ನಮ್ಮವರೇ: ಈಶ್ವರಪ್ಪ ಹೇಳಿಕೆಗೆ ಅಶ್ವತ್ಥನಾರಾಯಣ ಪ್ರತಿಕ್ರಿಯೆ | ಜನತಾ ನ್ಯೂಸ್
ಬೆಂಗಳೂರು : ನಮ್ಮ ಪಕ್ಷಕ್ಕೆ ಪ್ಲಾನೆಟ್ ನಿಂದ ಯಾರೂ ಬಂದಿಲ್ಲ. ನಮ್ಮಲ್ಲಿ ಹೊರಗಿನವರು ಯಾರೂ ಇಲ್ಲ, ಎಲ್ಲರೂ ನಮ್ಮವರೆ. ನಮ್ಮ ಸರ್ಕಾರದ ಅಂಗವಾಗಿದ್ದಾರೆ, ಪಕ್ಷದ ಭಾಗವಾಗಿದ್ದಾರೆ. ಈಗ ನಮ್ಮ ಜೊತೆ ಇದ್ದಾರೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.
ವಿಕಾಸಸೌಧದಲ್ಲಿಂದು ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈಶ್ವರಪ್ಪನವರು ಸಹ ನಮ್ಮ ಸರ್ಕಾರದ ಅಂಗವಾಗಿದ್ದು, ಪಕ್ಷದ ಭಾಗವಾಗಿದ್ದಾರೆ. ಈಗ ನಮ್ಮ ಜೊತೆ ಇದ್ದಾರೆ. ಅವರು (17 ಶಾಸಕರು ) ನಮ್ಮ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ ಎಂದರು.
ಬೇರೆ ಪಕ್ಷ ತ್ಯಜಿಸಿ ಬಂದವರೆಲ್ಲರೂ ನಮ್ಮವರೇ. ಇವತ್ತೇ ಅಲ್ಲ, ಮೊದಲಿನಿಂದಲೂ ಇದನ್ನೇ ಹೇಳುತ್ತಿದ್ದೇನೆ.ಹೊರಗಿನಿಂದ ಬಂದವರಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಡಿಸಿಎಂ, ಹಿರಿಯ ನಾಯಕರ ಹೇಳಿಕೆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದರು.