ನಾನು ದೆಹಲಿಗೆ ಹೋಗಿಲ್ಲ, ಅರುಣ್ ಸಿಂಗ್ ಬಂದಿದ್ದಾರೆ, ಎಲ್ಲವನ್ನೂ ಅರುಣ್ ಸಿಂಗ್ ಮುಂದೆ ಹೇಳ್ತೀನಿ: ಸಿ ಪಿ ಯೋಗೇಶ್ವರ್ | ಜನತಾ ನ್ಯೂಸ್
ಬೆಂಗಳೂರು : ವೈಯಕ್ತಿಕ ಕೆಲಸಕ್ಕೆ ನಾನು ಹೈದರಾಬಾದ್ಗೆ ಹೋಗಿದ್ದೆ ಎಂದು ತಿಳಿಸಿದ್ದಾರೆ. ರಾಜಕೀಯವಾಗಿ ನಾನು ಏನೂ ಮಾತನಾಡಲ್ಲ. ನಾನು ದೆಹಲಿಗೆ ಹೋಗಿಲ್ಲ ಎಂದು ಏರ್ಪೋರ್ಟ್ನಲ್ಲಿ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ.
ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿ.ಪಿ. ಯೊಗೇಶ್ವರ್ ಈ ಕುರಿತು ಪ್ರತಿಕ್ರಿಯಿಸಿದ್ದು, ನಾನು ದೆಹಲಿಗೆ ಹೋಗಿಲ್ಲ, ವೈಯಕ್ತಿಕ ಕಾರಣಗಳಿಂದ ಹೈದರಾಬಾದ್ಗೆ ಹೋಗಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ರಾಜಕೀಯವಾಗಿ ಏನು ಮಾತನಾಡಲ್ಲ, ಅರುಣ್ ಸಿಂಗ್ ಬಂದಿದ್ದಾರೆ, ಅಲ್ಲೇ ಹೋಗಿ ನನ್ನ ಅಹವಾಲು ಬಗ್ಗೆ ಮಾತನಾಡುತ್ತೇನೆ. ಮೂರು ದಿನಗಳಲ್ಲಿ ಪಕ್ಷದಲ್ಲಿನ ಭಿನ್ನಾಭಿಪ್ರಾಯ ಬಗೆಹರಿಯುವ ಬಗ್ಗೆ ಪ್ರತಿಕ್ರಿಯಿಸಿ ಈ ಬಗ್ಗೆ ಉಸ್ತುವಾರಿಯನ್ನ ಭೇಟಿ ಮಾತನಾಡುತ್ತೇನೆ ಎಂದು ತಿಳಿಸಿದರು.
ನಾನು ನೇರವಾಗಿ ಅರುಣ್ ಸಿಂಗ್ ಸಭೆಗೆ ಹೋಗ್ತೀನಿ. ಎಲ್ಲಾ ಸರಿ ಹೋಗಬಹುದು. ಎಲ್ಲವನ್ನೂ ಅರುಣ್ ಸಿಂಗ್ ಮುಂದೆ ಹೇಳ್ತೀನಿ. ಬಿಜೆಪಿಯ ಯಾವ ನಾಯಕರನ್ನೂ ನಾನು ಭೇಟಿಯಾಗಿಲ್ಲ ಎಂದು ಏರ್ಪೋರ್ಟ್ನಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ.