ವಿಶ್ವನಾಥ್ರವರೇ ಅವರೇ ನಿಮ್ಮ ವಯಸ್ಸೆಷ್ಟು? ಹತಾಶೆಯಿಂದ ಹೀಗೆಲ್ಲಾ ಮಾತನಾಡಬೇಡಿ | ಜನತಾ ನ್ಯೂಸ್
ಬೆಂಗಳೂರು : ಹೆಚ್ ವಿಶ್ವನಾಥ್ ವಿರುದ್ಧ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಮತ್ತು ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ನಾಯಕತ್ವದಲ್ಲಿ ನಮಗೆ ವಿಶ್ವಾಸವಿದೆ. ಯಾರು ಬಿಎಸ್ ವೈ ವಿರುದ್ಧ ಮಾತಾಡಿದ್ದಾರೆ, ಅವರು ಶಿಸ್ತುಕ್ರಮಕ್ಕೆ ಆಗ್ರಹ ಮಾಡುತ್ತೇವೆ. ಯಾರೋ ಒಂದಿರಿಬ್ಬರು ಬೆರಳೆಣಿಕೆಯಷ್ಟು ಮಂದಿ ಬಿಟ್ಟರೆ ಬೇರೆ ಯಾರು ಕೂಡ ಸಿಎಂ ವಿರುದ್ಧ ಮಾತಾಡುತ್ತಿಲ್ಲ, ಸಚಿವ ಸ್ಥಾನ ಸಿಗಲಿಲ್ಲ ಎಂಬ ಹತಾಶೆಯಿಂದ ಅವರು ಹೀಗೆಲ್ಲ ಮಾತನಾಡುತ್ತಿದ್ದಾರೆ ಎಂದು ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದರು.
ನೀವು ಮೂಲ ಬಿಜೆಪಿಗರು ಅಲ್ಲ. ನೀವೂ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರೂ ನಿಮ್ಮನ್ನು ನಮ್ಮ ನಾಯಕ ಯಡಿಯೂರಪ್ಪನವರು ಎಂಎಲ್ಸಿ ಯನ್ನಾಗಿ ಮಾಡಿದರು. ನಿಮ್ಮನ್ನು ಮಂತ್ರಿಯನ್ನಾಗಿ ಮಾಡಬೇಕು ಅಂತಿದ್ದರು. ಆದ್ರೆ ಕೋರ್ಟ್ ತಡೆಬಂದಿದೆ. ಸಚಿವ ಸ್ಥಾನ ಸಿಕ್ಕಿಲ್ಲವೆಂದು ವಿಶ್ವನಾಥ್ ಹೀಗೆಲ್ಲ ಮಾತನಾಡಬೇಡಿ ಎಂದು ಯಡಿಯೂರಪ್ಪ ಪರ ರೇಣುಕಾಚಾರ್ಯ ಹೇಳಿದರು.
ಯಡಿಯೂರಪ್ಪ ನವರಿಗೆ ವಯಸ್ಸಾದರೂ ಹಗಲಿರುಳು ಕೆಲಸ ಮಾಡ್ತಿದ್ದಾರೆ. ವಿಶ್ವನಾಥ್ ಅವರೇ ನಿಮಗೆ ವಯಸ್ಸು ಎಷ್ಟು.? ಹಿಂದೆ ಸಿದ್ದರಾಮಯ್ಯ, ಎಸ್ ಎಂ ಕೃಷ್ಣ ವಿರುದ್ದ ಏನೆಲ್ಲಾ ಮಾತಾಡಿದಿರಿ, ಆಮೇಲೆ ಜೆಡಿಎಸ್ ನಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟ, ದೇವೇಗೌಡ, ಕುಮಾರಸ್ವಾಮಿ ಗೆ ಮೋಸ ಮಾಡಿದಿರಿ, ನಮ್ಮ ಪಕ್ಷಕ್ಕೆ ನೀವು ಬಂದಾಗ ಕೋರ್ಟ್ ನಲ್ಲಿ ನಿಮ್ಮ ವಿರುದ್ದ ಆದೇಶ ಇದ್ದರೂ ನಿಮ್ಮನ್ನು ಎಂಎಲ್ಸಿ ಮಾಡಿದರು ಎಂದರು.
ಕೊರೊನಾ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಇಡೀ ರಾಜ್ಯದುದ್ದಕ್ಕೂ ಓಡಾಡಿಕೊಂಡು ಬಂದಿದ್ದಾರೆ. BSY ವಯಸ್ಸಾಗಿದ್ದರೂ ಯುವಕರಂತೆ ಕೆಲಸ ಮಾಡ್ತಿದ್ದಾರೆ. ಅದು ನಿಮ್ಮ ಮಬ್ಬುಗಣ್ಣಿಗೆ ಕಾಣುತ್ತಿಲ್ಲವಾ? ಎಂದು ರೇಣುಕಾಚಾರ್ಯ ಹೇಳಿದರು.
H.ವಿಶ್ವನಾಥ್ ಅವರೇ ಸಿಎಂ ಬಗ್ಗೆ ಮಾತನಾಡಲು ನೀವ್ಯಾರು? ನೀವು ಯಾವ ಪಕ್ಷದಲ್ಲಿರುತ್ತೀರೋ ಅಲ್ಲೇ ಟೀಕೆ ಮಾಡ್ತೀರಿ. ಈ ಹಿಂದೆ ಎಸ್.ಎಂ.ಕೃಷ್ಣ ವಿರುದ್ಧ ಟೀಕೆ ಮಾಡುತ್ತಿದ್ರಿ. ಯತ್ನಾಳ್ ಮನೋಭಾವವೇ ಹೆಚ್.ವಿಶ್ವನಾಥ್ಗೂ ಇದೆ. ಯತ್ನಾಳ್, ಹೆಚ್.ವಿಶ್ವನಾಥ್ ತಿರುಕನ ಕನಸು ಕಾಣುತ್ತಿದ್ದಾರೆ. ಸಿಎಂ ಆಗಲು ಕೋಟ್ ಹೊಲಿಸಿಕೊಂಡು ತಿರುಕನ ಕನಸು ಕಾಣುತ್ತಿದ್ದಾರೆ ಯತ್ನಾಳ್ ಎಂದು ಸಿಎಂ ಭೇಟಿ ಬಳಿಕ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.