ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ! | ಜನತಾ ನ್ಯೂಸ್
ಕಲಬುರಗಿ : ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದ ಘಟನೆ ನಗರದ ಕಾಂಗ್ರೆಸ್ ಭವನದ ಬಳಿ ತಡರಾತ್ರಿ ನಡೆದಿದೆ.
ರವಿ ಪೂಜಾರಿ(32) ಹತ್ಯೆಯಾದವ. ಬುಧವಾರ ತಡರಾತ್ರಿ 2 ಗಂಟೆಯಲ್ಲಿ ಈತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕಲಬುರಗಿಯ ರಾಜಾಪುರ ಬಡಾವಣೆಯ ನಿವಾಸಿ ರವಿ ಪೂಜಾರಿ ಹತ್ಯೆಯಾದ ವ್ಯಕ್ತಿ. ಎರಡು ವರ್ಷಗಳ ಹಿಂದೆ ರವಿ ಪೂಜಾರಿ, ಫೈನ್ ಆರ್ಟ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಗೆ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿಯನ್ನಾಗಿಸಿ, ಬಳಿಕ ಗರ್ಭಪಾತ ಮಾಡಿಸಲು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಯುವತಿಗೆ ಗರ್ಭಪಾತವಾಗಿದ್ದು ಸಾವನ್ನಪ್ಪಿದ್ದಳು.
ಆಕೆಯ ಮೃತದೇಹವನ್ನ ಕಾರಿನಲ್ಲಿ ಹೈದ್ರಾಬಾದ್ ಸಮೀಪ ತೆಗೆದುಕೊಂಡು ಹೋಗಿ ಅಲ್ಲೇ ಪೆಟ್ರೋಲ್ ಸುರಿದು ಶವ ಸಟ್ಟುಹಾಕಿದ್ದ. ಈ ಪ್ರಕರಣದಲ್ಲಿ ಜೈಲು ಸೇರಿದ್ದ ರವಿ ಪೂಜಾರಿ, ಇತ್ತೀಚಿಗೆ ಹೊರ ಬಂದಿದ್ದ.
ರವಿ ಪೂಜಾರಿಯನ್ನ ಬುಧವಾರ ರಾತ್ರಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.