ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿದಳೆಂದು ಮಗಳನ್ನೇ ಕೊಲೆಗೈದ ಅಪ್ಪ! | ಜನತಾ ನ್ಯೂಸ್
ಮೈಸೂರು : ಬೇರೆ ಜಾತಿಯ ಹುಡುಗನನ್ನ ಪ್ರೀತಿಸಿದ್ದಕ್ಕೆ ತನ್ನ ಮಗಳನ್ನೇ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಮಹದೇಶ್ವರ ದೇವಸ್ಥಾನ ಬೀದಿಯಲ್ಲಿ ಈ ಘಟನೆ ನಡೆದಿದೆ.
ಪಿರಿಯಾಪಟ್ಟಣದ ಮಹದೇಶ್ವರ ದೇವಸ್ಥಾನದ ಬಳಿ ಇರುವ ಜಯರಾಮ್ ಎಂಬುವವನೇ ತನ್ನ ಮಗಳಾದ ಗಾಯತ್ರಿ ಯನ್ನು ಕೊಚ್ಚಿ ಕೊಂದವನು.
ಗಾಯತ್ರಿ ಎಂಬಾಕೆ ರಾಘವೇಂದ್ರ ಎಂಬ ಅನ್ಯ ಕೋಮಿನ ಹುಡುಗನನ್ನು ಪ್ರೀತಿಸುತ್ತಿದ್ದಳು. ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು. ಮನೆಯವರು ಬೇಡ ಎಂದರೂ ಕೇಳದೇ ಆತನನ್ನು ಮದುವೆಯಾಗುತ್ತೇನೆ ಎನ್ನುತ್ತಿದ್ದಳು.
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಂದೆಗೆ ಊಟ ಕೊಡಲು ಬಂದ ಗಾಯತ್ರಿ ಮೇಲೆ ತಂದೆ ಜಯರಾಮ್ ಮಚ್ಚನಿಂದ ಕೊಚ್ಚಿ ಕೊಂದಿದ್ದಾನೆ.ನಂತರ ಸೀದಾ ಪೋಲಿಸ್ ಠಾಣೆಗೆ ಹೋಗಿ ಶರಣಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಬಳಿಕ ಘಟನಾ ಸ್ಥಳಕ್ಕೆ ಡಿವೈಎಸ್ಪಿ ರವಿಪ್ರಸಾದ್, ವೃತ್ತ ನಿರೀಕ್ಷಕರಾದ ಜಗದೀಶ್, ಪ್ರದೀಪ್ ಇತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.