ಹೃದಯ ವಿದ್ರಾವಕ ಘಟನೆ: ವಿದ್ಯುತ್ ತಂತಿ ತುಳಿದು ಸಹೋದರರಿಬ್ಬರು ದುರ್ಮರಣ | ಜನತಾ ನ್ಯೂಸ್
ಕಲಬುರಗಿ : ವಿದ್ಯುತ್ ತಂತಿ ತಗುಲಿ ಸಹೋದರರಿಬ್ಬರು ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲ್ಲೂಕಿನ ಕಣಮೇಶ್ವರ ಗ್ರಾಮದಲ್ಲಿ ನಡೆದಿದೆ.
ಆಕಾಶ ಬಸವರಾಜ ಸುಂಬಡ (18) ಪ್ರಕಾಶ ಬಸವರಾಜ ಸುಂಬಡ (21) ಮೃತ ಸಹೋದರರು.
ಯಡ್ರಾಮಿ ತಾಲೂಕಿನ ಹರನಾಳ ಗ್ರಾಮದ ನಿವಾಸಿಗಳಾದ ಇವರು, ಜಮೀನೊಂದರಲ್ಲಿ ನಡೆಯುತ್ತಿದ್ದ ಚೆಕ್ ಡ್ಯಾಮ್ ಕಾಮಗಾರಿಗಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ ದಾಟಿ ಹೋಗುವಾಗ ಅವಘಡ ಸಂಭವಿಸಿದೆ. ಹೊಲದಲ್ಲಿ ಹಾಕಿದ್ದ ವಿದ್ಯುತ್ ತಂತಿ ದಾಟಿ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
English summary :Kalburgi