ನೀರು ತುಂಬಿದ್ದ ಬಕೆಟ್ಗೆ ಬಿದ್ದು 2 ವರ್ಷದ ಮಗು ಸಾವು | ಜನತಾ ನ್ಯೂಸ್
ಮೈಸೂರು : ನೀರು ತುಂಬಿದ ಬಕೆಟ್ಗೆ ಬಿದ್ದು 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ತರಿಕಲ್ಲು ಗ್ರಾಮದಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ತರಿಕಲ್ ಗ್ರಾಮದ ಸುಂದರರಾಜ್ ಎಂಬುವರ ಎರಡು ವರ್ಷ ಮಗು ಸಮರ್ಥ್ ಮೃತ ದುರ್ದೈವಿ. ಮನೆಯಲ್ಲಿ ಆಟವಾಡುತ್ತಲೇ ಇದ್ದ ಮಗು ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಮನೆಯವರೆಲ್ಲ ಅಕ್ಕ-ಪಕ್ಕದ ಮನೆಯನ್ನೂ ಹುಡುಕಾಡಿದರೂ ಸಿಗಲಿಲ್ಲ.
ಮನೆಯ ಬಾತ್ ರೂಂ ಬಳಿ ಹೋಗಿ ನೋಡಿದಾಗ ನೀರು ತುಂಬಿದ್ದ ಬಕೆಟ್ನಲ್ಲಿ ಮುಳುಗಿ ಸಾವನ್ನಪ್ಪಿರುವುದು ಕಂಡುಬಂದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
English summary :Mysuru