ಎರಡೇ ಮಕ್ಕಳ ಜನಸಂಖ್ಯೆ ನೀತಿ ಎಲ್ಲಾ ಸರ್ಕಾರಿ ಯೋಜನೆಯಲ್ಲಿ ಕಡ್ಡಾಯ : ಅಸ್ಸಾಂ ಸಿಎಂ ಶರ್ಮಾ | ಜನತಾ ನ್ಯೂಸ್
ದಿಸ್ಪುರ್ : ಅಸ್ಸಾಂ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಎರಡು ಮಕ್ಕಳ ಮಿತಿಯನ್ನು ಕಡ್ಡಾಯಗೊಳಿಸಲಾಗುವುದು, ಎಂದು ಶರ್ಮಾ ಹೇಳಿದರು. ಅಸ್ಸಾಂನಲ್ಲಿ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವಾಗ ರಾಜ್ಯವು ಜನಸಂಖ್ಯಾ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಿದೆ, ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಆದಾಗ್ಯೂ, ಪರಿಶಿಷ್ಟ ಜಾತಿ(ಎಸ್ಸಿ), ಪರಿಶಿಷ್ಟ ಪಂಗಡ(ಎಸ್ಟಿ) ಮತ್ತು ಚಹಾ ಬುಡಕಟ್ಟು ಸಮುದಾಯಕ್ಕೆ ಸೇರಿದ ಜನರಿಗೆ ರಾಜ್ಯ ಸರ್ಕಾರದ ಯೋಜನೆಗಳನ್ನು ಪಡೆಯಲು ಎರಡು ಮಕ್ಕಳ ಮಾನದಂಡಗಳಿಂದ ವಿನಾಯಿತಿ ನೀಡಲಾಗುವುದು, ಎಂದಿದ್ದಾರೆ.
ಬಡತನವನ್ನು ಕಡಿಮೆ ಮಾಡಲು ಮತ್ತು ಸಾಮಾಜಿಕ ಸಮಸ್ಯೆಗಳನ್ನು ನಿಯಂತ್ರಿಸಲು ಯೋಗ್ಯ ಜನಸಂಖ್ಯೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕೆಂದು, ಸಿಎಂ ಶರ್ಮಾ ಅಲ್ಪಸಂಖ್ಯಾತ ಸಮುದಾಯವನ್ನು ಒತ್ತಾಯಿಸಿದ ಕೆಲವೇ ದಿನಗಳ ನಂತರ ಈ ಬೆಳವಣಿಗೆಗೆ ಮುಂದಾಗಿದೆ.
"ಅಸ್ಸಾಂ ಜನಸಂಖ್ಯಾ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು. ಅರೂನಾಡಿ ಯೋಜನೆ, ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಮುಂತಾದ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಎರಡಕ್ಕೂ ಅಧಿಕ ಮಕ್ಕಳನ್ನು ಹೊಂದಿರದ ಕುಟುಂಬಗಳು ಮಾತ್ರ ಸವಲತ್ತು ಪಡೆಯಲು ಅರ್ಹರಾಗಿರುತ್ತಾರೆ" ಎಂದು ಸಿಎಂ ಶರ್ಮಾ ಹೇಳಿದ್ದಾರೆ.
"ಇದು ಸಾಲಗಳ ಮನ್ನಾ ಅಥವಾ ಸರ್ಕಾರಿ ಯೋಜನೆಗಳಿರಲಿ, ನಾವು ಮುಂದಿನ ದಿನಗಳಲ್ಲಿ ಜನಸಂಖ್ಯಾ ಮಾನದಂಡಗಳನ್ನು ಜಾರಿಗೆ ತರಲಿದ್ದೇವೆ."
ಮುಸ್ಲಿಂ ಸಮುದಾಯವು ಯೋಗ್ಯವಾದ ಕುಟುಂಬ ಯೋಜನೆಗಳನ್ನು ಅಳವಡಿಸಿಕೊಂಡರೆ ನಾವು ಅಸ್ಸಾಂನಲ್ಲಿ ಬಹಳಷ್ಟು ಸಾಮಾಜಿಕ ಸಮಸ್ಯೆಗಳನ್ನು ಕೊನೆಗೊಳಿಸಬಹುದು ಎಂದು ನಾನು ಭಾವಿಸುತ್ತೇನೆ ”ಎಂದು ಶರ್ಮಾ ಹಿಂದೆ ತಿಳಿಸಿದ್ದರು.