ಮಗುವಿನೊಂದಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ತಾಯಿ | ಜನತಾ ನ್ಯೂಸ್
ಹಾಸನ : ಜಿಲ್ಲೆಯ ಸಕಲೇಶಪುರ ತಾಲೂಕಿನ ಆನೇಮಹಲ್ ಗ್ರಾಮದಲ್ಲಿ ಮನ ನೊಂದ ಮಹಿಳೆಯೊಬ್ಬರು ಮಗುವನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿಯನ್ನು ಕಳೆದುಕೊಂಡ ಮಹಿಳೆ ಪತ್ನಿಯನ್ನು ಕಳೆದು ಕೊಂಡ ವ್ಯಕ್ತಿಯನ್ನ ಮರು ವಿವಾಹವಾಗಿ ನಂತರ ಮನನೊಂದು ತನ್ನ ಎರಡುವರೆ ವರ್ಷದ ಮಗುವನ್ನ ಕೊಂದು ತಾನೂ ನೇಣಿಗೆ ಶರಣಾಗಿರುವ ಘಟನೆ ಹಾಸನದ ಸಕಲೇಶಪುರ ತಾಲೂಕಿನ ಆನೇಮಹಲ್ ಬಳಿ ನಡೆದಿದೆ.
27 ವರ್ಷದ ಪ್ರಜ್ವಲಾ ತನ್ನ ಎರಡು ವರ್ಷದ ಹೆಣ್ಣು ಮಗು ಸಾಧ್ವಿ, ಮಗುವನ್ನು ಸೀರೆ ಯಿಂದ ನೇಣು ಹಾಕಿ ಮತ್ತೊಂದು ಸೀರೆಯಿಂದ ತಾನು ಅದೇ ಪ್ಯಾನ್ಗೆ ನೇಣು ಬೀಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿ ಮೋಹನ್ ಮೊಬೈಲ್ಗೆ ಕರೆಮಾಡಿದಾಗ ಕರೆಸ್ವೀಕರಿಸದ ಕಾರಣ ನೆರೆಮನೆಗೆ ಕರೆಮಾಡಿ ಮನೆ ಕಡೆ ಗಮನಿಸುವಂತೆ ತಿಳಿಸಿದ್ದು. ಈ ವೇಳೆ ನೆರೆಮನೆಯವರು ಕಿಟಿಕಿ ತೆಗೆದು ಗಮನಿಸಿದ ವೇಳೆ ವಿಚಾರ ಬೆಳಕಿಗೆ ಬಂದಿದೆ.
ಮೃತ ಪ್ರಜ್ವಲ ಹಾಗೂ ಮೋಹನ್ಗೆ ಇದು ಎರಡನೇ ಮದುವೆಯಾಗಿದ್ದು ಪಜ್ವಲರವರ ಮೊದಲ ಪತಿ ಕಳೆದ ಎರಡು ವರ್ಷದ ಹಿಂದೆ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು. ಮೋಹನ್ ಪತ್ನಿ ಕಳೆದ ಮೂರು ತಿಂಗಳ ಹಿಂದೆ ಹೆರಿಗೆ ವೇಳೆ ಮೃತಪಟ್ಟಿದ್ದರು.
ಇದರಿಂದಾಗಿ ಹಿರಿಯರು ಸೇರಿ ಕಳೆದ ಬುಧವಾರ ಇಬ್ಬರಿಗೂ ಪಜ್ವಲ ತವರು ಮನೆಯಾದ ಹಡ್ಲಹಳ್ಳಿ ಗ್ರಾಮದಲ್ಲಿ ಮದುವೆ ಮಾಡಿದ್ದು, ಹಿರಿಯ ಗಂಡನ ಪುತ್ರಿಯನ್ನು ಕರೆದುಕೊಂಡು ಶುಕ್ರವಾರ ಗಂಡನ ಮನೆಗೆ ಬಂದಿದ್ದರು.
ಪ್ರಕರಣ ಸಕಲೇಶಪುರ ನಗರ ಠಾಣೆಯಲ್ಲಿ ದಾಖಲಾಗಿದೆ.