ಬಿಎಸ್ಸಿ ಅಗ್ರಿ ಕೋರ್ಸ್ಗಳಿಗೆ ನೀಡುವ ಮೀಸಲಾತಿ ಪ್ರಮಾಣ ಶೇ.40 ರಿಂದ ಶೇ.50ಕ್ಕೆ ಹೆಚ್ಚಳ | ಜನತಾ ನ್ಯೂಸ್
ಬೆಂಗಳೂರು : ಬಿಎಸ್ಸಿ ಅಗ್ರಿ ಮತ್ತು ಸರಿ ಸಮಾನ ಕೋರ್ಸ್ಗಳಲ್ಲಿ ರೈತ ಮಕ್ಕಳಿಗೆ ನೀಡಲಾಗ್ತಿದ್ದ ಮೀಸಲಾತಿ ಪ್ರಮಾಣವನ್ನ ಶೇ.40ರಿಂದ ಶೇ.50ಕ್ಕೆ ಹೆಚ್ಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ 193.65 ಕೋಟಿ ರೂಪಾಯಿ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಸಂಪುಟ ಸಭೆಯ ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಈ ಕುರಿತಾಗಿ ಮಾಹಿತಿ ನೀಡಿದ್ದಾರೆ.
ಡಿಪಿಆರ್ ನಲ್ಲಿ ಕಾನ್ಪಿಡೆನ್ಸಿಯಲ್ ರಿಪೋರ್ಟ್ ಎಲೆಕ್ಟ್ರಾನಿಕ್ ಮುಖಾಂತರ ಸಿಆರ್ ಕಳಿಸುವ ವ್ಯವಸ್ಥೆ ಕೈಗೊಳ್ಳಲಾಗುವುದು. ಬೆಳಗಾವಿ ರಾಣಿ ಚೆನ್ನಮ್ಮ ವಿವಿ 126 ಎಕರೆ ಜಾಗ ಅಡಳಿತ ಕಟ್ಟಡ, ಲೈಬ್ರರಿ ನಿರ್ಮಾಣಕ್ಕೆ 120 ಕೋಟಿ ಹಣ ಒಪ್ಪಿಗೆ ನೀಡಲಾಗಿದೆ ಎಂದರು.
ಸಾದಿಲ್ವಾರು ನಿಧಿ 2500 ಕೋಟಿ ಹೆಚ್ಚಳಕ್ಕೆ ಸಂಪುಟ ಅನುಮೋದನೆ ನೀಡಿದೆ. ಇನ್ನು ಮೈಸೂರು ಮೆಡಿಕಲ್ ಕಾಲೇಜಿಗೆ 154 ಕೋಟಿ ರೂಪಾಯಿ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದರು.
100 ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ ಸಂಪುಟ ಅನುಮೋದನೆ ನೀಡಿದ್ದು, ಇದಕ್ಕಾಗಿ 200 ಕೋಟಿ ವೆಚ್ಚ ತಗುಲಿದೆ ಎಂದರು.
ಅಂಕೋಲ ತಾಲ್ಲೂಕಿನಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲು ಒಪ್ಪಿಗೆ ಸೂಚಿಸಲಾಗಿದೆ.
ಸಾದಿಲ್ವಾರು ನಿಧಿ 2500 ಕೋಟಿ ರೂಪಾಯಿ ಹೆಚ್ಚಳಕ್ಕೆ ತೀರ್ಮಾನಿಸಲಾಗಿದೆ. ಭಟ್ಕಳ ಮತ್ತು ಚಳ್ಳಕೆರೆ ಮಿನಿ ವಿಧಾನಸೌಧ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ನೀಡಲಾಗಿದೆ.
ಭೂ ಮಂಜೂರು ಕಾಯ್ದೆಗೆ ತಿದ್ದುಪಡಿ, ಖರಾಬ್ ಜಮೀನು ಮಧ್ಯ, ಕೆರೆ ಕಟ್ಟೆ ಬಂದಿದ್ದರೆ ಕಾಲ ಮಿತಿ ಇಲ್ಲದೆ ಬಳಕೆ ಮಾಡಲು ಅವಕಾಶ ಇತ್ತು. ಕನಿಷ್ಠ 10 ಇಲ್ಲದಿದ್ದರೆ ಮಾತ್ರ ಬಳಕೆ ಮಾಡಲು ತೀರ್ಮಾನ.
ಡ್ಯಾಮ್ ಗಳ ರೀಪೇರಿಗೆ 1500 ಕೋಟಿ ರೂ. ಯೋಜನೆಗೆ ಒಪ್ಪಿಗೆ ಕೇಂದ್ರ ಸರ್ಕಾರ 1050 ಕೋಟಿ ನೀಡಲಿದೆ.
ಜಲ ನೀತಿ ಮಾಡುವ ಕುರಿತು ಸಂಪುಟ ಉಪ ಸಮಿತಿ ರಚನೆಗೆ ನಿರ್ಧಾರ.
ನಮ್ಮ ರಾಜ್ಯದಲ್ಲಿರಯವ ನೀರಿನ ಬಳಕೆ ಮಾಡುವ ಕುರಿತು, ನೀರು ನಿರ್ವಹಣೆ, ಯಾವುದಕ್ಕೆ ಆದ್ಯತೆ.ನೀಡಬೇಕು ಎನ್ನುವುದನ್ನು ನೋಡಲು ನೀತಿ ಮಾಡಲಾಗುವುದು.
ನಬಾರ್ಡ್ ಯೋಜನೆ ಅಡಿಯಲ್ಲಿ 415 ಕೋಟಿ ವೆಚ್ಚದಲ್ಲಿ ಹೊನ್ನಾಳಿ ತಾಲೂಕಿನಲ್ಲಿ ಹನುಮಸಾಗರ ಏತ ನೀರಾವರಿ ಯೋಜನೆಗೆ ಒಪ್ಪಿಗೆ 94 ಕೆರೆ ತುಂಬಿಸುವುದು.