ಮೂತ್ರ ವಿಸರ್ಜನೆ ವೇಳೆ ವಿದ್ಯುತ್ ತಂತಿ ಸ್ಪರ್ಶ, ಇಬ್ಬರ ಸಾವು | ಜನತಾ ನ್ಯೂಸ್
ಬೆಂಗಳೂರು : ಮೂತ್ರ ವಿಸರ್ಜನೆ ವೇಳೆ ಕರೆಂಟ್ ಶಾಕ್ ಹೊಡೆದು ಇಬ್ಬರು ಕಾರ್ಮಿಕರು ದುರ್ಮರಣಕ್ಕೀಡಾಗಿರುವ ಘಟನೆ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಘಟನೆ ನಡೆದಿದೆ.
ಕರಿಯಪ್ಪ(22) ಹಾಗೂ ನಾಗರಾಜು (19) ಮೃತ ಕಾರ್ಮಿಕರು. ಮೃತರು ಮೂಲತಃ ರಾಯಚೂರು ಜಿಲ್ಲೆಯ ಕಾರ್ಮಿಕರು. ಒಜಾಸ್ ಕಂಪೆನಿಯಲ್ಲಿ ಕಳೆದ ಒಂದು ವರ್ಷದಿಂದ ಉದ್ಯೋಗದಲ್ಲಿದ್ದರು. ಓಜಾಸ್ ಕಂಪೆನಿ ಮೂಲಕ ರಾಜಕಾಲುವೆ ಸ್ವಚ್ಛಗೊಳಿಸುವ ಕೆಲಸ ಮಾಡಿಕೊಂಡಿದ್ದರು.
ಈ ದಿವಸ ಟಿ ದಾಸರಹಳ್ಳಿ ಬಳಿ ಮಲ್ಲಸಂದ್ರ ರಾಜಕಾಲುವೆ ಕೆಲಸ ಮುಗಿಸಿಕೋಂಡು ತಾವು ವಾಸವಿದ್ದ ಎಚ್ ಎಸ್ ಆರ್ ಲೇಔಟ್ ಗೆ ಹೋಗುವಾಗ ನಾಲ ರಸ್ತೆ ಬಳಿ ಕೆಲಸ ಮಾಡುತ್ತಿದ್ದ ತಮ್ಮ ಸಂಗಡಿಗರುನ್ನು ಕರೆದು ಕೋಂಡು ಹೋಗಲು ಬಂದಿದ್ದು ಆ ವೇಳೆಯಲ್ಲಿ ನಾಲಾರಸ್ತೆಯ ರಾಜ ಕಾಲುವೆ ಬಳಿ ಮೂತ್ರ ವಿಸರ್ಜನೆಗೆ ತೆರಳಿದ್ದು,
ಅಲ್ಲಿ ಕಾಲುವೆಗೆ ಅಳವಡಿಸಿದ ಮೇಷ್ ಬೆಸ್ಕಮ್ ರ ಹೈಟೆನ್ಷನ್ ವೈಯರ್ ತಗಲಿ ಮೇಷಗೆ ವಿದ್ಯುತ್ ಸಂಚರಿಸಿದ್ದು ಸದರಿಯವರು ಮೇಷ್ ನ್ನು ಮುಟ್ಟಿದ್ದು ಇಬ್ಬರಿಗೂ ಕರೆಂಟ್ ಶಾಕ್ ತಾಗಿ ಸ್ಧಳದಲ್ಲಿಯೆ ಸಾವನ್ನಪ್ಪಿರುತ್ತಾರೆ.
ಮೂತ್ರ ವಿಸರ್ಜನೆ ವೇಳೆ ಗೊತ್ತಿಲ್ಲದೆ ವಿದ್ಯುತ್ ತಂತಿ ಸ್ಪರ್ಶ ಮಾಡಿದ್ದಾರೆ. ವಿದ್ಯುತ್ ತಂತಿ ಹಿಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.