ಆತ್ಮನಿರ್ಭರ ಭಾರತ ಅಡಿ ನಿರ್ಮಿತ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಮುಂದಿನ ವರ್ಷ ಕಾರ್ಯಾರಂಭ - ರಾಜನಾಥ್ ಸಿಂಗ್ | ಜನತಾ ನ್ಯೂಸ್
ಕೊಚ್ಚಿ : ಭಾರತದ ಮೊಟ್ಟ ಮೊದಲ "ಮೇಡ್-ಇನ್-ಇಂಡಿಯಾ"(ಭಾರತದಲ್ಲೇ ನಿರ್ಮಿತ) ವಿಮಾನವಾಹಕ ನೌಕೆಯಾದ ಐಎನ್ಎಸ್ ವಿಕ್ರಾಂತ್ ಮುಂದಿನ ವರ್ಷ ಕಾರ್ಯಾರಂಭ ಮಾಡಲಿದೆ, ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನೌಕಾಪಡೆಯ ಕೊಚ್ಚಿಯ ನೆಲೆ ಪ್ರವಾಸದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಐಎನ್ಎಸ್-ವಿಕ್ರಾಂತ್ ಅನ್ನು ಸ್ಥಳೀಯ ವಿಮಾನವಾಹಕ ನೌಕೆ-1 ಅಥವಾ ಐಎಸಿ-1 ಎಂದೂ ಕರೆಯಲಾಗುತ್ತದೆ.
ಭಾರತೀಯ ನೌಕಾನೆಲೆಗಳಾದ ಕಾರವಾರ ಹಾಗೂ ಕೊಚ್ಚಿಗೆ ಎರಡು ದಿನಗಳ ಪ್ರವಾಸದಲ್ಲಿರುವ ರಕ್ಷಣಾ ಮಂತ್ರಿ ಸಿಂಗ್ ಅವರು ಇಂದು ಕೇರಳದ ಕೊಚ್ಚಿಯ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ ನಿರ್ಮಿಸಲಾಗುತ್ತಿರುವ ಐಎನ್ಎಸ್ ವಿಕ್ರಾಂತ್(ಐಎಸಿ)ಗೆ ಭೇಟಿ ನೀಡಿದರು.
ಸ್ಥಳೀಯ ವಿಮಾನವಾಹಕ ನೌಕೆ ಅಥವಾ ಐಎಸಿ ನಿರ್ಮಾಣದಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿದ ನಂತರ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, ರಾಜನಾಥ್ ಸಿಂಗ್ ಇದನ್ನು "ಭಾರತದ ಹೆಮ್ಮೆ ಮತ್ತು ಆತ್ಮನಿರ್ಭಾರ ಭಾರತದ ಹೊಳೆಯುವ ಉದಾಹರಣೆ" ಎಂದು ಬಣ್ಣಿಸಿದ್ದಾರೆ.
"ಮುಂದಿನ ವರ್ಷ ಈ ಐಎಸಿಯನ್ನು ನಿಯೋಜಿಸುವುದು ಭಾರತದ ಸ್ವಾತಂತ್ರ್ಯದ 75 ನೇ ವರ್ಷಕ್ಕೆ ಸೂಕ್ತವಾದ ಗೌರವವಾಗಿದೆ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಇದಕ್ಕೂ ಮೊದಲು ನಿನ್ನೆ, "ಪ್ರಾಜೆಕ್ಟ್ ಸೀಬರ್ಡ್" ಅಡಿಯಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿಯ ಪ್ರಗತಿಯನ್ನು ಪರಿಶೀಲಿಸಲು ಇಂದು ಕಾರವಾರ ನೌಕಾನೆಲೆಗೆ ಭೇಟಿ ನೀಡಿದರು. ಈ ಯೋಜನೆ ಪೂರ್ಣಗೊಂಡ ನಂತರ, ಕಾರವಾರ ನೌಕಾ ನೆಲೆ ಏಷ್ಯಾದ ಅತಿದೊಡ್ಡ ಮತ್ತು ಅತ್ಯಂತ ಪರಿಣಾಮಕಾರಿ ನೌಕಾ ನೆಲೆಯಾಗಲಿದೆ ಎಂದು ನನಗೆ ವಿಶ್ವಾಸವಿದೆ, ಎಂದು ದೇಶದ ರಕ್ಷಣಾ ಸಚಿವರು ಹೇಳಿದ್ದಾರೆ.