ಮಹಾ ಅಘಾಡಿ ಮಾಜಿ ಗೃಹ ಮಂತ್ರಿ ಅನಿಲ್ ದೇಶಮುಖ್ ಮನೆ ಮೇಲೆ ಇಡಿ ದಾಳಿ : ಶೋಧದ ವಿವರಗಳು | ಜನತಾ ನ್ಯೂಸ್
ನಾಗ್ಪುರ್ : ಮಹಾರಾಷ್ಟ್ರದ ಮಹಾ ಆಘಾಡಿ ಮಹಾಘಟಬಂಧನ ಸರ್ಕಾರದ ಮಾಜಿ ಗೃಹ ಸಚಿವ ಹಾಗೂ ಎನ್ಸಿಪಿ ಹಿರಿಯ ಮುಖಂಡ ಅನಿಲ್ ದೇಶಮುಖ್ ಅವರ ನಾಗಪುರದ ಮೆಲೆಯ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ದಾಳಿ ನಡೆಸಿ ಭಾರಿ ಶೋಧ ಕಾರ್ಯಾಚರಣೆ ನಡೆಸಿದೆ.
ಹಪ್ತಾ ವಸೂಲಿ ಮಾಡುವ ಮೂಲಕ ಪೋಲಿಸ್ ಅಧಿಕಾರಿಗಳಿಂದ 100 ಕೋಟಿ ರೂ.ಗಳ ಬೇಡಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಎನ್ಸಿಪಿ ಮುಖಂಡರ ವಿರುದ್ಧ ಕೇಂದ್ರ ತನಿಖಾ ದಳ(ಸಿಬಿಐ) ಎಫ್ಐಆರ್ ದಾಖಲಿಸಿದ ಕೆಲವೇ ದಿನಗಳಲ್ಲಿ ಇಡಿ ಕೂಡ ದೇಶಮುಖ್ ವಿರುದ್ಧ ಪ್ರಕರಣ ದಾಖಲಿಸಿದೆ.
ಇಡಿ ಈವರೆಗೆ ನಗರದಲ್ಲಿ ದೇಶ್ಮುಖ್ ಮತ್ತು ಅವರ ಎಲ್ಲಾ ಸಹಚರರು ಸೇರಿದಂತೆ ಚಾರ್ಟರ್ಡ್ ಅಕೌಂಟೆಂಟ್ಸ್ ಮೇಲೆ ಸರಣಿ ದಾಳಿ ನಡೆಸುವ ಮೂಲಕ ಮತ್ತು ಶೋಧ ನಡೆಸಿದೆ. ಮುಂಬೈನಲ್ಲಿರುವ ದೇಶಮುಖ್ ಅವರ ಸಹಾಯಕರ ವಿರುದ್ಧವೂ ಇದೇ ರೀತಿಯ ಕ್ರಮಗಳನ್ನು ಪ್ರಾರಂಭಿಸಲಾಗಿತ್ತು.
ಲಂಚ ಪ್ರಕರಣಗಳಲ್ಲಿ ಕೇಳಿಬಂದ ಹೆಸರಲ್ಲಿ ದೇಶಮುಖ್ ಆಪ್ತ ಹಾಗೂ ಸಧ್ಯಕ್ಕೆ ಅಮಾನತಿನಲ್ಲಿರುವ ಪೋಲಿಸ್ ಅಧಿಕಾರಿ ಸಚಿನ್ ವಾಜೆ ವಿರುದ್ಧ ಏನ್ಐಎ ಈಗಾಗಲೇ ತನಿಖೆ ಮುಂದುವರೆಸಿದೆ.