ಸ್ವಗ್ರಾಮಕ್ಕೆ ರಾಷ್ಟ್ರಪತಿ ಭೇಟಿ: ನಮಸ್ಕರಿಸಿ ಭಾವುಕರಾದ ರಾಮನಾಥ್ ಕೋವಿಂದ್ | ಜನತಾ ನ್ಯೂಸ್
ಉತ್ತರ ಪ್ರದೇಶ : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ತಮ್ಮ ಸ್ವಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಉತ್ತರ ಪ್ರದೇಶದ ಕಾನ್ಪುರ್ ದೆಹಾತ್ ಜಿಲ್ಲೆಯ ಪರಾವುಂಕ್ ಗ್ರಾಮಕ್ಕೆ ಹೆಲಿಪ್ಯಾಡ್ನಲ್ಲಿ ಬಂದಿಳಿದ ರಾಮನಾಥ್ ಕೋವಿಂದ್ ಭಾವುಕರಾಗಿ ತಾಯ್ನೆಲಕ್ಕೆ ನಮಸ್ಕರಿಸಿದ್ದಾರೆ.
ಅವರು ಇಂದು ತಮ್ಮ ಹುಟ್ಟೂರಾದ ಉತ್ತರ ಪ್ರದೇಶದ ಕಾನ್ಪುರದ ದೇಹತ್ ಜಿಲ್ಲೆಯ ಪರಾಂಖ್ ಗ್ರಾಮದಲ್ಲಿ ಅಭಿನಂದನೆ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ನೆಲಕ್ಕೆ ತಲೆಬಾಗಿ ನೆಲಕ್ಕೆ ನಮಸ್ಕರಿಸಿದರು.
ಹಳ್ಳಿಯೊಂದರ ಹುಡುಗ ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವ ಗೌರವ ಸಿಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಸೊಬಗು ಎಂದು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಹೇಳಿದ್ದಾರೆ.
ರಾಮ್ನಾಥ್ ಕೋವಿಂದ್ ಅವರ ಹುಟ್ಟೂರಾದ ಕಾನ್ಪುರದ ದೇಹತ್ ಜಿಲ್ಲೆಯ ಪರೌಂಖ್ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಇಂದು ನಾನು ಯಾವುದೇ ಸ್ಥಾನಕ್ಕೇರಿದ್ದರೂ ಕೂಡ ಅದರ ಶ್ರೇಯಸ್ಸು ಈ ಹಳ್ಳಿಯ ಮಣ್ಣು, ಈ ಪ್ರದೇಶ ಮತ್ತು ನಿಮ್ಮ ಪ್ರೀತಿ ಮತ್ತು ಆಶೀರ್ವಾದಕ್ಕೆ ಸಲ್ಲುತ್ತದೆ. ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂವಿಧಾನ ರಚಿಸಿದವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.
ಹಳ್ಳಿಯ ಮಣ್ಣಿನ ಪರಿಮಳ ಮತ್ತು ಅಲ್ಲಿನ ಜನರ ನೆನಪುಗಳು ಯಾವಾಗಲೂ ನನ್ನ ಹೃದಯದಲ್ಲಿ ಅಚ್ಚಳಿಯದೆ ಉಳಿದಿವೆ. ನನ್ನ ಪಾಲಿಗೆ ಪರೌಂಖ್ ಎನ್ನುವುದು ಒಂದು ಹಳ್ಳಿ ಮಾತ್ರವಲ್ಲ, ಬದಲಿಗೆ ದೇಶಸೇವೆಯನ್ನು ಮಾಡಲು ನನಗೆ ಸ್ಫೂರ್ತಿ ಸಿಕ್ಕ "ಮಾತೃಭೂಮಿ' ಎಂದು ಕೋವಿಂದ್ ಹೇಳಿದರು.
ಈ ಸನ್ನಿವೇಶದಲ್ಲಿ ನಾನು ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಂವಿಧಾನ ರಚಿಸಿದ ಕರಡು ಸಮಿತಿಗೆ ಅವರ ತ್ಯಾಗ ಮತ್ತು ಕೊಡುಗೆಗೆ ತಲೆಬಾಗುತ್ತೇನೆ. ನಾನು ಇಂದು ಯಾವ ಸ್ಥಾನದಲ್ಲಿದ್ದೇನೋ ಅದರ ಕ್ರೆಡಿಟ್ ಈ ಗ್ರಾಮದ ಮಣ್ಣು ಮತ್ತು ನೀವೆಲ್ಲರೂ ತೋರಿದ ಪ್ರೀತಿ ಆಶೀರ್ವಾದ್ದು ಎಂದು ಭಾವುಕರಾಗಿ ರಾಷ್ಟ್ರಪತಿ ರಾಮನಾರ್ಥ ಕೋವಿಂದ್ ಮಾತನಾಡಿದ್ದಾರೆ.