ಕೋವಿಡ್-19 : ಮೃತ ವ್ಯಕ್ತಿಗಳಿಗೆ ಅನುಕಂಪದ ಪರಿಹಾರ ನಿರ್ಧರಿಸಲು ಕೇಂದ್ರಕ್ಕೆ ಸುಪ್ರಿಂ ಸೂಚನೆ | ಜನತಾ ನ್ಯೂಸ್
ನವದೆಹಲಿ : ಆರು ವಾರಗಳಲ್ಲಿ ಕೋವಿಡ್-19 ನಿಂದ ಸಾವನ್ನಪ್ಪಿದ ವ್ಯಕ್ತಿಗಳಿಗೆ ಅನುಕಂಪದ ಪರಿಹಾರ ಮೊತ್ತವನ್ನು ನಿರ್ದಿಷ್ಟಪಡಿಸುವ ಮಾರ್ಗಸೂಚಿಗಳನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಬುಧವಾರ ನಿರ್ದೇಶನ ನೀಡಿದೆ. ಮಾರ್ಚ್ 14, 2020ರಂದು ಕೇಂದ್ರವು ಡಿವಿಎ ಕಾಯ್ದೆ ಅಡಿಯಲ್ಲಿ ಕೋವಿಡ್-19 ಅನ್ನು ವಿಪತ್ತು ಎಂದು ಘೋಷಿಸಿತ್ತು.
ನೀಡಬೇಕಾದ ಯಾವುದೇ ಮೊತ್ತವನ್ನು ನ್ಯಾಯಾಲಯ ನಿಗದಿಪಡಿಸಿಲ್ಲ ಮತ್ತು ಅದನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ(ಎನ್ಡಿಎಂಎ) ಬುದ್ಧಿವಂತಿಕೆಗೆ ಬಿಟ್ಟಿದೆ.
ಕೋವಿಡ್ ನ್ನು ವಿಪತ್ತು ಎಂದು ವಿಪತ್ತು ನಿರ್ವಹಣಾ ಕಾಯ್ದೆ(ಡಿಎಂಎ) 2005ರ ಅಡಿಯಲ್ಲಿ ಅಧಿಸೂಚನೆ ಹೊರಡಿಸಲಾಗಿದೆ ಎಂದು, ಹೇಳಿರುವ ವಕೀಲರಾದ ಗೌರವ್ ಕುಮಾರ್ ಬನ್ಸಾಲ್ ಮತ್ತು ರೀಪಕ್ ಕನ್ಸಾಲ್ ಅವರು ಸಲ್ಲಿಸಿದ ಎರಡು ಪ್ರತ್ಯೇಕ ಅರ್ಜಿಗಳ ಮೇರೆಗೆ ಈ ಆದೇಶ ಬಂದಿದೆ. ಕೇಂದ್ರ ಸರ್ಕಾರವು ಕಾಯಿದೆಯ ಸೆಕ್ಷನ್12(iii)ರ ಪ್ರಕಾರ ದುರಂತದ ಸಮಯದಲ್ಲಿ ಮರಣ ಹೊಂದಿದವರಿಗೆ 4 ಲಕ್ಷ ಅನುಕಂಪದ ಪರಿಹಾರ ನೀಡಲು ಬದ್ಧವಾಗಿರುತ್ತದೆ.
ನ್ಯಾಯಾಲಯವು ಡಿಎಂಎಯ ಸೆಕ್ಷನ್12(iii) ರ ಪ್ರಕಾರ, ಎನ್ಡಿಎಂಎಗೆ ಕನಿಷ್ಟ ಪರಿಹಾರದ ಮಾನದಂಡಗಳ ಅಡಿಯಲ್ಲಿ ಅನುಕಂಪದ ಪರಿಹಾರ ಕುರಿತು ಮಾರ್ಗಸೂಚಿಗಳನ್ನು ನೀಡುವುದು ಕಡ್ಡಾಯವಾಗಿದೆ, ಎಂದಿದೆ