ಎತ್ತುಗಳ ಮೈತೊಳೆಯಲು ಹೋದ ಬಾಲಕರಿಬ್ಬರ ದುರಂತ ಸಾವು! | ಜನತಾ ನ್ಯೂಸ್
ಹಾವೇರಿ : ಎತ್ತುಗಳ ಮೈತೊಳೆಯಲು ಕೆರೆಗೆ ಹೋಗಿದ್ದ ಹದಿನಾಲ್ಕು ವರ್ಷದ ಬಾಲಕರಿಬ್ಬರು ಹೆಣವಾಗಿ ಮನೆಗೆ ಮರಳಿರುವ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ದೂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಭಿಷೇಕ ಹಂಡೋರಿ ಮತ್ತು ಹರೀಶ ಬಾಳಿಕಾಯಿ ಮೃತ ದುರ್ದೈವಿಗಳು. ಇವರಿಬ್ಬರು ಗೂದಿಹಳ್ಳಿ ಗ್ರಾಮದ ಮಾಸೂರು ರಸ್ತೆ ಬಳಿಯ ಕೆರೆಯಲ್ಲಿ ಹಸುವಿನ ಮೈತೊಳೆಯಲು ಹೋಗಿದ್ದರು.
ಗ್ರಾಮದ ಬಸನಗೌಡ ಹಂಡೋರಿ ಎಂಬುವರ ಪುತ್ರ ಹದಿನಾಲ್ಕು ವರ್ಷದ ಅಭಿಷೇಕ್ ಹಂಡೋರಿ ಮತ್ತು ಅವರ ಸಂಬಂಧಿ ಹದಿನಾಲ್ಕು ವರ್ಷದ ಹರೀಶ್ ಬಾಳಿಕಾಯಿ ಸೇರಿಕೊಂಡು ನಿನ್ನೆ ಮಧ್ಯಾಹ್ನ ಎತ್ತುಗಳ ಮೈತೊಳೆಯಲು ಮಾಸೂರು ರಸ್ತೆಯಲ್ಲಿರುವ ಬಂದಮ್ಮನ ಕೆರೆಗೆ ಹೋಗಿದ್ದರು. ಆಗ ಆಕಸ್ಮಿಕವಾಗಿ ಇಬ್ಬರು ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಕೆರೆ ಆಳವಾಗಿ ಇದ್ದಿದ್ದರಿಂದ ಈಜು ಬಾರದೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತರ ಪಾಲಕರ ಆಕ್ರಂದನ ಮುಗಿಲುಮುಟ್ಟಿತ್ತು. ಹಿರೆಕೇರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.