ಕೆ.ಜಿ.ಹಳ್ಳಿ ಗಲಭೆ ಪ್ರಮುಖ ಆರೋಪಿ ಎಸ್ಡಿಪಿಐ ಬ್ಲಾಕ್ ಅಧ್ಯಕ್ಷ ಸೈಯದ್ ಅಬ್ಬಾಸ್ ಬಂಧಿಸಿದ ಏನ್ಐಎ | ಜನತಾ ನ್ಯೂಸ್
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ನಗರವನ್ನು ಕೆಲವೇ ಗಂಟೆಗಳಲ್ಲೇ ಸಂಪೂರ್ಣ ಬೆಚ್ಚುಬಿಳಿಸುವಂತೆ ಇಸ್ಲಾಮಿಕ್ ದಂಗೆಕೋರರು ನಡೆಸಿದ ಭೀಕರ ಗಲಭೆ ಹಾಗೂ ಹಿಂಸಾಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಮುಖ ಸಂಚುಕೋರ ಸೈಯದ್ ಅಬ್ಬಾಸ್ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಏನ್ಐಎ) ಬಂಧಿಸಿದೆ, ಎನ್ನಲಾಗಿದೆ.
ಸೆಪ್ಟೆಂಬರ್ 21, 2020ರಲ್ಲಿ ಪುನಃ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದ ಏನ್ಐಎ, ಈ ಪ್ರಕರಣದಲ್ಲಿ ಈಗಾಗಲೇ 138 ಆರೋಪಿಗಳ ಮೇಲೆ ಚಾರ್ಜ್ ಶೀಟ್ ದಾಖಲಿಸಿದೆ.
ಪ್ರಕಟಣೆ ಪ್ರಕಾರ, ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಬೆಂಗಳೂರು ಗಲಭೆಯಲ್ಲಿ ಭಾಗಿಯಾಗಿದ್ದಕ್ಕಾಗಿ, ಸೈಯದ್ ಇಮ್ತಿಯಾಸ್ ಎಂಬವರ ಮಗ 38 ವರ್ಷದ ಆರೋಪಿ ಸೈಯದ್ ಅಬ್ಬಾಸ್ನನ್ನು ಬಂಧಿಸಿದೆ. ಬೆಂಗಳೂರಿನ ಗೋವಿಂದಪುರ ನಿವಾಸಿ ಅಬ್ಬಾಸ್ ಅವರು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ(ಎಸ್ಡಿಪಿಐ) ಬ್ಲಾಕ್ ಅಧ್ಯಕ್ಷ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಬುಧವಾರ(ಜೂನ್ 30) ಬಿಡುಗಡೆಯಾದ ಹೇಳಿಕೆಯಲ್ಲಿ, ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ತನಿಖೆಯಲ್ಲಿ ಆರೋಪಿ ಎಸ್ಡಿಪಿಐ ನಾಯಕ ಸೈಯದ್ ಅಬ್ಬಾಸ್ ಮತ್ತು ಎಸ್ಡಿಪಿಐನ ಇತರ ಪದಾಧಿಕಾರಿಗಳು ವಾಹನಗಳನ್ನು ಸುಡುವಲ್ಲಿ ಮತ್ತು ಕೆ.ಜಿ.ಹಳ್ಳಿ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರತ ಪೋಲಿಸ್ ಅಧಿಕಾರಿಗಳ ಮೇಲೆ ಹಲ್ಲೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ.
ಈ ಸಂಚುಕೋರರು ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗೆ ಪೆಟ್ರೋಲ್ ಬಾಂಬ್ ಬಳಸಿ ಬೆಂಕಿ ಹಚ್ಚಿದ್ದಾರೆ ಮತ್ತು ಪೊಲೀಸ್ ಠಾಣೆ ಸುತ್ತಮುತ್ತಲ ಪ್ರದೇಶದಲ್ಲಿ ನಿಲ್ಲಿಸಿದ್ದ ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ, ಎಂದು ಎನ್ಐಎ ಪ್ರಕಟಣೆಯಲ್ಲಿ ಸೇರಿಸಲಾಗಿದೆ.
ಆತನ ಬಂಧನದ ನಂತರ, ಎನ್ಐಎ ಅಬ್ಬಾಸ್ನನ್ನು ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ಆರೋಪಿಗಳನ್ನು ಆರು ದಿನಗಳ ಕಾಲ ಎನ್ಐಎ ಕಸ್ಟಡಿಗೆ ವಹಿಸಿದೆ.
2020 ರ ಆಗಸ್ಟ್ 11 ರ ಸಂಜೆ ಮಾರಣಾಂತಿಕ ಆಯುಧಗಳಿಂದ ಶಸ್ತ್ರಸಜ್ಜಿತವಾದ ಹತೋಟಿಗೆ ಸಿಗದ ಗುಂಪು ಬೆಂಗಳೂರಿನ ಕೊಡುಗೊಂಡನ ಹಳ್ಳಿ ಪೊಲೀಸ್ ಠಾಣೆ ಹೊರಗೆ ಕಾನೂನುಬಾಹಿರವಾಗಿ ಜಮಾಯಿಸಿದ ಅಶಿಸ್ತಿನ ಜನಸಮೂಹವು ನಡೆಸಿದ ಗಲಭೆಗೆ ಸಂಬಂಧಿಸಿದಂತೆ ಪ್ರಕರಣವನ್ನು ಮೂಲತಃ ಆಗಸ್ಟ್ 12, 2020 ರಂದು ದಾಖಲಿಸಲಾಗಿದೆ.
ಈ ಉರ್ದಿಕ್ತ ಗುಂಪು ಪೆಟ್ರೋಲ್ ಬಾಂಬ್ ಬಳಸಿ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸ್ ಠಾಣೆ ಆವರಣದಲ್ಲಿ ನಿಲ್ಲಿಸಲಾದ ಸರ್ಕಾರಿ ವಾಹನಗಳನ್ನು ದ್ವಂಸಗೊಳಿಸಲಾಗಿದೆ ಮತ್ತು ಬೆಂಕಿ ಹಚ್ಚಲಾಗಿದೆ.