ಭೀಕರ ಅಪಘಾತ: ನವ ವಿವಾಹಿತೆ ಸಾವು, ಮದುಮಗ ಸೇರಿ 7 ಜನರ ಸ್ಥಿತಿ ಗಂಭೀರ | ಜನತಾ ನ್ಯೂಸ್
ವಿಜಯಪುರ : ಕುಟುಂಬಸ್ಥರೊಂದಿಗೆ ದೇವರ ದರ್ಶನಕ್ಕೆಂದು ತೆರಳುವ ಮಾರ್ಗಮಧ್ಯೆ ಟೆಂಪೋ ಮತ್ತು ಕ್ರೂಸರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮದುಮಗಳು ಮೃತಪಟ್ಟಿದ್ದಾಳೆ.
ನಿನ್ನೆಯಷ್ಟೇ (ಜುಲೈ 1) ವಿವಾಹ ಕಾರ್ಯ ಮುಗಿದಿದ್ದು, ಇಂದು ದೇವರ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಈ ರಸ್ತೆ ಅಪಘಾತದಲ್ಲಿ ನವ ವಿವಾಹಿತೆ ರಾಣಿ ಗಣೇಶ ಚೌಹಾಣ್ (26) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗೂಡ್ಸ್ ಡಿಕ್ಕಿ ಹೊಡೆದ ರಭಸಕ್ಕೆ ಕ್ರೂಸರ್ನಲ್ಲಿದ್ದ ಮೃತ ರಾಣಿಯ ಪತಿ ಗಣೇಶ ಸೇರಿ 6 ಜನರಿಗೆ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಿಂದಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗೂಡ್ಸ್ ವಾಹನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
RELATED TOPICS:
English summary :Vijaypura