ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ | ಜನತಾ ನ್ಯೂಸ್
ಬೆಂಗಳೂರು : ಹಾಡಗಲೇ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಬನಶಂಕರಿ ದೇವಾಲಯದ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಟೆಂಪೋವನ್ನು ನಿಧಾನವಾಗಿ ತಿರುವಿನಲ್ಲಿ ಟರ್ನ್ ಮಾಡುವ ವೇಳೆ ದುಷ್ಕರ್ಮಿಗಳು ಚಾಲಕನನ್ನು ವಾಹನದಿಂದ ಹೊರಗೆಳೆದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ. ಈ ಘಟನೆ ಬೆಂಗಳೂರು-ಹೊಸೂರು ಹೆದ್ದಾರಿಯ ಬಳಗಾರನಹಳ್ಳಿ ತಿರುವಿನಲ್ಲಿ ನಡೆದಿದೆ.
ಬಿದರಗುಪ್ಪೆ ಮೂಲದ ಸೋಮಶೇಖರ್(45) ಕೊಲೆಯಾದ ವ್ಯಕ್ತಿ. ಸ್ವಂತ ಟೆಂಪೋ ಹೊಂದಿದ್ದ ಸೋಮಶೇಖರ್ ಬಳಗಾರನಹಳ್ಳಿಯ ಕಾರ್ಖಾನೆಯಿಂದ ಲೋಡ್ ತುಂಬಿಸಿಕೊಂಡು ಹೊರಡುವ ವೇಳೆ ಕೊಲೆ ಮಾಡಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಪೊಲೀಸರು ರವಾನಿಸಿದ್ದಾರೆ. ಕೃತ್ಯ ನಡೆದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.