ಯಾರು ಬೇಕಾದರು ಅರ್ಜಿ ಹಾಕಲಿ ನೀವು ಬೇಕಾದರು ಹಾಕಿ: ಡಿ ಕೆ ಶಿವಕುಮಾರ್ | ಜನತಾ ನ್ಯೂಸ್
ಬೆಂಗಳೂರು : ಕಾಂಗ್ರೆಸ್ ಪಕ್ಷ, ಸಿದ್ಧಾಂತ, ನಾಯಕತ್ವ, ಕೆಲಸದ ಮೇಲೆ ನಂಬಿಕೆ ಇದೆಯೋ ಅಂತಹ ಯಾರೂ ಬೇಕಾದರೂ ಕಾಂಗ್ರೆಸ್ ಪಕ್ಷ ಸೇರಿಕೊಳ್ಳಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನಮ್ಮಲ್ಲಿ ಒಂದು ಸಮಿತಿ ಇದೆ. ಆ ಸಮಿತಿ ಬಳಿ ಹೋಗಿ ಸ್ಕ್ರೂಟನಿ ಮಾಡಬೇಕಾಗುತ್ತೆ. ಯಾರಿಗೆ ನಮ್ಮ ಲೀಡರ್ ಶಿಫ್ ಒಪ್ಪಿಗೆ ಇದೆ ಹಾಕಬಹುದು ಎಂದರು.
ಇನ್ನು ಬ್ಲಾಕ್, ಜಿಲ್ಲಾ ಕಾರ್ಯಕರ್ತರ ಅವರ ಅಭಿಪ್ರಾಯ ಕೇಳ್ತೀವಿ. ಮೊದಲು ಅರ್ಜಿ ಹಾಕಲಿ ಅಮೇಲೆ ನೋಡೋಣ. ಯಾರಬೇಕಾದ್ರು ಅರ್ಜಿ ಹಾಕಲಿ. ನೀವು ಬೇಕಾದ್ರು ಹಾಕಿ. ಕಾಂಗ್ರೆಸ್ ಸಿದ್ದಾಂತ ನಂಬಿಕೆ ಇದ್ದರೆ ಬರಲಿ. ಯಾರು ಅರ್ಜಿ ಹಾಕಿದ್ದಾರೆ ಈಗ ಬಹಿರಂಗ ಬೇಡ ಎಂದಿದ್ದಾರೆ.
ಬಿಜೆಪಿಗೆ ಸೇರ್ಪಡೆಯಾದ 17 ಜನರಲ್ಲಿ ಯಾರೂ ಅರ್ಜಿ ಹಾಕಿಲ್ಲ, ಬೇರೆಯವರು ಇಬ್ಬರು ಹಾಕಿದ್ದಾರೆ. ರಾಜಕೀಯದಲ್ಲಿ ಪಕ್ಷ ಬಿಟ್ಟು ಹೋಗುವುದು ಬರುವುದು ಸಾಮಾನ್ಯ. ಹಾಗಾಗಿ ಯಾರೂ ಬೇಕಾದರೂ ಅರ್ಜಿ ಹಾಕಲಿ ಎಂದು ಡಿ ಕೆ ಶಿವಕುಮಾರ್ ಹೇಳಿದರು.