ನವವಿವಾಹಿತೆ ಸಾವು: ಪ್ರೀತಿಸಿ ಮದುವೆಯಾಗಿದ್ದ ಪ್ರಿಯತಮೆಯನ್ನೇ ಕೊಲೆಗೈದನಾ ಪತಿ? | ಜನತಾ ನ್ಯೂಸ್
ಬೆಳಗಾವಿ : ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿಯ ಶಹಾಪುರದ ಅಲ್ವಾನ್ ಗಲ್ಲಿಯಲ್ಲಿ ನಡೆದಿದೆ.
ಬೆಳಗಾವಿ ಶಹಾಪುರದ ಅಲ್ವಾನ್ಗಲ್ಲಿ ನಿವಾಸಿ ಜ್ಯೋತಿ(19) ಮೃತ ದುರ್ದೈವಿ. 23 ವಷ್ದ ಲಕ್ಷ್ಮೀಕಾಂತ್ ಯಲ್ಲಾರಿ ಮತ್ತು ಜ್ಯೋತಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಜಾತಿ ಬೇರೆಬೇರೆಯಾಗಿದ್ದರೂ, ಮೂರು ತಿಂಗಳ ಹಿಂದೆ ರಿಜಿಸ್ಟ್ರಾರ್ ಮದುವೆಯನ್ನೂ ಮಾಡಿಕೊಂಡು ಒಟ್ಟಿಗೆ ವಾಸಿಸುತ್ತಿದ್ದರು.
ಕುಟುಂಬದ ವಿರೋಧದ ಮಧ್ಯೆ 3 ತಿಂಗಳ ಹಿಂದೆಯಷ್ಟೇ ಇಬ್ಬರೂ ಮದುವೆ ಆಗಿದ್ದರು. ಮದುವೆ ನಂತರ ಜ್ಯೋತಿಗೆ ಪತಿ ಲಕ್ಷ್ಮಿಕಾಂತ ಹಾಗೂ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು. ನನ್ನ ಮಗಳನ್ನು ಪತಿ ಸೇರಿ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ ಎಂದು ಯುವತಿ ಪೋಷಕರು ಆರೋಪಿಸುತ್ತಿದ್ದಾರೆ.
ಘಟನೆ ಬಳಿಕ ಪತಿ ಲಕ್ಷ್ಮಿಕಾಂತ ಪರಾರಿಯಾಗಿದ್ದಾರೆ. ಲಕ್ಷ್ಮಿಕಾಂತ ಹಾಗೂ ಆತನ ಪೋಷಕರು ಸೇರಿ ನಾಲ್ವರನ್ನು ಬಂಧಿಸಬೇಕು ಎಂದು ಜ್ಯೋತಿ ಪೋಷಕರು ಪಟ್ಟುಹಿಡಿದ್ದಾರೆ.
ಶಹಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.