ಭಾರೀ ಮಳೆಗೆ ಬೈಕ್ ಸಮೇತ ಕೊಚ್ಚಿ ಹೋದ ದಂಪತಿ | ಜನತಾ ನ್ಯೂಸ್
ವಿಜಯನಗರ : ಭಾರೀ ಮಳೆಗೆ ಹಳ್ಳದಲ್ಲಿ ಬೈಕ್ ಸಮೇತ ದಂಪತಿ ಕೊಚ್ವಿ ಹೋಗಿ ದುರಂತ ಅಂತ್ಯ ಕಂಡ ಘಟನೆ ಹೂವಿನಹಡಗಲಿ ತಾಲೂಕಿನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ-ಮುತ್ಕೂರು ಗ್ರಾಮದ ನಿವಾಸಿಗಳಾದ ಮಲ್ಲಿಕಾರ್ಜುನ (55) ಮತ್ತು ನಿರ್ಮಲಾ ಮೃತರು.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಪೂರ್ವ ಮತ್ತು ಪಶ್ಚಿಮ ಕಾಲ್ವಿ ಗ್ರಾಮದ ಬಳಿಯ ಹಳ್ಳದ ಮೂಲಕ, ಮಲ್ಲಿಕಾರ್ಜುನ್ ಹಾಗೂ ಪತ್ನಿ ಹಗರಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಮೊತ್ಕೂರು ಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಈ ವೇಳೆ ಭಾರೀ ಮಳೆಯಿಂದಾಗಿ ಹಳ್ಳದಲ್ಲಿ ನೀರು ಹೆಚ್ಚಾಗಿ ಬೈಕ್ ಸಮೇತ ದಂಪತಿಗಳು ಕೊಚ್ಚಿ ಹೋಗಿದ್ದಾರೆ.
ಬೆಳಿಗ್ಗೆ ದಾರಿಯಲ್ಲಿ ಸಾಗುತ್ತಿದ್ದಂತ ಸಂದರ್ಭದಲ್ಲಿ ದಾರಿಹೋಕರಿಗೆ ಬೈಕ್ ಕಂಡು ಬಂದ ಕಾರಣ, ಪರಿಶೀಲನೆ ನಡೆಸಿದಾಗ, ಪತಿ-ಪತ್ನಿ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿರಬಹುದು ಎಂಬುದಾಗಿ ತಿಳಿದು ಬಂದಿದೆ. ಇದರಿಂದಾಗಿ ಹುಡುಕಾಡಿದ ಸಂದರ್ಭದಲ್ಲಿ ಮಲ್ಲಿಕಾರ್ಜುನ್(55) ಮೃತದೇಹ ಪತ್ತೆಯಾಗಿದೆ. ಅವರ ಪತ್ನಿಯ ಮೃತದೇಹಕ್ಕಾಗಿ ಹುಡುಕಾಟ ಮುಂದುವರೆದಿದೆ.