ನೆರೆರಾಜ್ಯ ಕೇರಳದಲ್ಲಿ 13,772 ಹೊಸ ಪ್ರಕರಣ : 3ನೇ ಅಲೆಯ ಸಂಕೇತ? | ಜನತಾ ನ್ಯೂಸ್
ತಿರುವನಂತಪುರಮ್ : ರಾಜ್ಯದಲ್ಲಿ ಕರೋನವೈರಸ್ ಸಾಂಕ್ರಾಮಿಕ ರೋಗದ ಎರಡನೇ ತರಂಗವು ಕಡಿಮೆಯಾಗುತ್ತಿರುವಂತೆ ರಾಜ್ಯಾದಂತ್ಯ ಸಂಪೂರ್ಣ ಅನ್ ಲಾಕ್ ವಾಗಿದ್ದು, ನೆರೆರಾಜ್ಯ ಕೇರಳದ ಸಕ್ರಿಯ 13,772 ಹೊಸ ಕೊರೊನಾವೈರಸ್ ಪ್ರಕರಣಗಳು ದಾಖಲಾಗಿವೆ, ಸೋಂಕಿನ ಪ್ರಮಾಣ 30.25 ಲಕ್ಷಕ್ಕೆ ಏರಿದೆ, ಎಂದು ರಾಜ್ಯ ಸರ್ಕಾರ ಪ್ರಕಟಿಸಿದೆ.
2ನೇ ಅಲೆಯಲ್ಲಿ ಸಂಕಷ್ಟದ ಸ್ಥಿತಿ ಎದುರಿಸಿದ್ದ ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಸದ್ಯಕ್ಕೆ ಸ್ಥಿರವಾಗಿದ್ದರೂ, ಕೇರಳದಲ್ಲಿ ಪ್ರಕರಣಗಳಲ್ಲಿ ನಿರಂತರ ಏರಿಕೆ ಕಂಡುಬಂದಿದೆ. ನಿನ್ನೆ ಬುಧವಾರ, ರಾಜ್ಯದ ಒಟ್ಟು ಪ್ರಕರಣಗಳು ಸಹ 30 ಲಕ್ಷಗಳನ್ನು ದಾಟಿದ್ದು, ಇದು ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಈ ಹಲವು ಪ್ರಕರಣಗಳನ್ನು ದಾಖಲಿಸಿದ ಮಹಾರಾಷ್ಟ್ರದ ನಂತರದ ಎರಡನೇ ರಾಜ್ಯವಾಗಿದೆ.
ಕಳೆದ 10 ದಿನಗಳಲ್ಲಿ ಕೇರಳ ರಾಜ್ಯವು 1.23 ಲಕ್ಷ ಪ್ರಕರಣಗಳನ್ನು ವರದಿ ಮಾಡಿದೆ. ಇದೇ ಅವಧಿಯಲ್ಲಿ 1.01 ಲಕ್ಷಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ.
ಕೇರಳಕ್ಕೆ ಹೊಂದಿಕೊಂಡಿರುವ ಮಂಗಳೂರಿನಲ್ಲಿ ಕರ್ನಾಟಕದ ಮಟ್ಟಿಗೆ ಅತಿಹೆಚ್ಚು ಪ್ರಕರಣ ದಾಖಲಾಗುತ್ತಿದೆ. ಮೊದಲನೇ ಅಲೆಯ ಬಳಿಕ ಕರ್ನಾಟಕ ರಾಜ್ಯದಲ್ಲಿ ಪ್ರಕರಣ ಬಹುತೇಕ ಕಡಿಮೆ ಆದ ಬಳಿಕ ನೆರೆರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಕೇರಳ ಸಂಪರ್ಕದಿಂದ ರಾಜ್ಯದಲ್ಲಿ ಪ್ರಕರಣಗಳು ಹೆಚ್ಚಲು ಆರಂಭಿಸಿದೆ ಎನ್ನಲಾಗಿದೆ. ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು, ಗಡಿಗಳಲ್ಲಿ ನಿರ್ದಿಷ್ಟ ಜಾಗ್ರತಿ ವಹಿಸದೇ ಇದ್ದಲ್ಲಿ, ಇನ್ನೊಮ್ಮೆ ಪರಿಸ್ಥಿತಿ ಬಿಗಡಾಯಿಸುವ ಎಲ್ಲಾ ಸಾದ್ಯತೆಗಳಿವೆ.
Kerala records 13,772 fresh coronavirus cases, infection tally rises to 30.25 lakh: State government
— Press Trust of India (@PTI_News) July 8, 2021