ತೈಲ ದರ ಏರಿಕೆ ಪ್ರತಿಭಟನೆ ಸಂದರ್ಭದಲ್ಲಿ ಮುರಿದು ಬಿದ್ದ ಎತ್ತಿನಗಾಡಿ, ನೆಲಕ್ಕೂರುಳಿದ ಕಾಂಗ್ರೆಸ್ ಮುಖಂಡರು | ಜನತಾ ನ್ಯೂಸ್
ಮುಂಬೈ : ಮಹಾರಾಷ್ಟ್ರ ರಾಜ್ಯದ ಆಡಳಿತರೂಡ ಪಕ್ಷವಾದ ಕಾಂಗ್ರೆಸ್ ಮುಖಂಡರು ಇಂದು ತೈಲ ದರ ಏರಿಕೆ ಕುರಿತು ಪ್ರತಿಭಟನೆ ಸಂದರ್ಭದಲ್ಲಿ ಎತ್ತಿನಗಾಡಿ ಮುರಿದು ಮುರಿದು ಬಿದ್ದ ಪರಿಣಾಮ ಎತ್ತುಗಳಿಗೂ ಸೇರಿದಂತೆ ಕೆಲವರಿಗೆ ಗಾಯವಾದ ಘಟನೆ ವರದಿಯಾಗಿದೆ.
ಇಂದು ಬೆಳಿಗ್ಗೆ ಮಹಾರಾಷ್ಟ್ರದ ಮುಂಬೈಯಲ್ಲಿ ಮೋದಿ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರೊಂದಿಗೆ ಮಿತಿಮೀರಿ ಎತ್ತಿನಗಾಡಿ ಏರಿದ್ದ ಪರಿಣಾಮ, ಭಾರ ತಡೆದುಕೊಳ್ಳಲಾಗದೆ ಎತ್ತಿನ ಗಾಡಿಯೇ ಮುರಿದು ಬಿದ್ದಿದೆ. ನೋಡನೋಡುತ್ತಿದ್ದಂತೆ ಗಾಡಿ ಏರಿದ್ದ ಜನರೆಲ್ಲಾ ನೆಲಕ್ಕುರುಳಿ ಬಿದ್ದಿದ್ದಾರೆ.
ಗಾಡಿಯೇ ಮುರಿದು ಬಿಳುವಷ್ಟು ಭಾರವನ್ನು ಮೂಕಪ್ರಾಣಿ ಎತ್ತಿನ ಮೇಲೆ ಹೊರಿಸಿದ್ದಕ್ಕಾಗಿ ಕಾಂಗ್ರೆಸ್ ಮುಖಂಡರ ಮೇಲೆ ಭಾರಿ ಅಕ್ರೋಶ ವ್ಯಕ್ತವಾಗುತ್ತಿದೆ. ನೆಟ್ಟಿಗರು ಪ್ರಾಣಿಗಳ ಈ ಕ್ರೌರ್ಯಕ್ಕಾಗಿ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಎಂದು ಒತ್ತಾಯಿಸಿದ್ದಾರೆ.
ತೈಲ ಬೆಲೆಯಲ್ಲಿ ಪ್ರಮುಖ ಭಾಗವಾದ ತೆರಿಗೆಯಲ್ಲಿ ಹೆಚ್ಚಿನ ಪಾಲು ರಾಜ್ಯ ಸರ್ಕಾರದ ಕೈಸೇರುವ ವಿಷಯ ಈಗ ಹೊಸ ವಿಷಯವೇನಲ್ಲ. ಹೀಗಿದ್ದರೂ ಮಹಾರಾಷ್ಟ್ರದಲ್ಲಿ ತಮ್ಮ ಪಕ್ಷದ ಆಡಳಿತವಿದ್ದರೂ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಲ್ಲದೇ, ಇಂಧನವನ್ನು ಜಿಎಸ್ಟಿ ವ್ಯಾಪಿಗೆ ತರುವ ಮೋದಿ ಸರ್ಕಾರದ ಪ್ರಯತ್ನಗಳಿಗೆ ಕಾಂಗ್ರೆಸ್ ಆಡಳಿತರೂಡ ರಾಜ್ಯಗಳಿಂದಲೇ ಪ್ರಮುಖ ತಡೆ ಎದುರಾಗಿದೆ, ಎಂದು ಹಲವರು ತರಾಟೆ ತೆಗೆದುಕೊಂಡಿದ್ದಾರೆ.
Ox cart overloaded with Congress activists protesting against the Modi govt came crashing down in Mumbai, Maharashtra this morning. Strict action must be taken against these jobless people for Animal cruelty. Where is @PetaIndia?? pic.twitter.com/bOV4qRWCKY
— Priti Gandhi - प्रीति गांधी (@MrsGandhi) July 10, 2021