ಹೆಗಲ ಮೇಲೆ ಕೈ ಹಾಕುವುದು ಎಂದರೆ ಏನು?; ಕಾರ್ಯಕರ್ತನ ಮೇಲಿನ ಹಲ್ಲೆಗೆ ಡಿಕೆಶಿ ಸ್ಪಷ್ಟನೆ | ಜನತಾ ನ್ಯೂಸ್
ಬೆಂಗಳೂರು : ಹೆಗಲ ಮೇಲೆ ಕೈ ಹಾಕಲು ಬಂದ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಕೈ ಮಾಡಿರುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಡಿಕೆ ಶಿವಕುಮಾರ್, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕಾರ್ಯಕರ್ತ ತಮ್ಮ ಮೇಲೆ ಹೆಗಲ ಮೇಲೆ ಕೈ ಹಾಕಲು ಮುಂದಾದ. ಸಾರ್ವಜನಿಕವಾಗಿ ಹಾಗೇ ಹೆಗಲ ಮೇಲೆ ಕೈ ಹಾಕುವುದು ಎಂದರೆ ಏನು ಅರ್ಥ. ಇದು ತಪ್ಪು ಸಂದೇಶ ಸಾರುತ್ತದೆ. ಇದೇ ಉದ್ದೇಶದಿಂದ ತಾವು ಈ ಕ್ರಮಕ್ಕೆ ಮುಂದಾಗಿದ್ದಾಗಿ ಅವರು ತಿಳಿಸಿದ್ದಾರೆ.
ನಿನ್ನೆ ಹಿರಿಯ ರೈತ ಮುಖಂಡರು, ಮಾಜಿ ಸಂಸದರಾಗಿರುವ ಜಿ ಮಾದೇಗೌಡ ಅವರ ಆರೋಗ್ಯ ವಿಚಾರಿಸಲು ಕೆಪಿಸಿಸಿ ಅಧ್ಯಕ್ಷರು ತೆರಳಿದಾಗ ಈ ಘಟನೆ ನಡೆದಿದೆ. ತಮ್ಮ ಪಕ್ಕದಲ್ಲಿ ಸಾಗುತ್ತಿದ್ದ ಕಾರ್ಯಕರ್ತನೊಬ್ಬ ವಿಡಿಯೋ ಮಾಡುತ್ತಿರುವಾಗ ಮತ್ತೊಬ್ಬ ಕಾರ್ಯಕರ್ತ ಬಂದು ಡಿಕೆ ಶಿವಕುಮಾರ್ ಹೆಗಲ ಮೇಲೆ ಕೈ ಹಾಕಲು ಮುಂದಾದರು. ಈ ವೇಳೆ ತಾಳ್ಮೆ ಕಳೆದುಕೊಂಡ ಡಿಕೆ ಶಿವಕುಮಾರ್ ಅವರಿಗೆ ಕಪಾಳ ಮೋಕ್ಷ ನಡೆಸಿದ್ದರು.