ಸಿಡಿಲು ಬಡಿದು ಪ್ರವಾಸಿಗರು, ಮಕ್ಕಳು ಸೇರಿದಂತೆ 18 ಸಾವು, 21 ಜನರಿಗೆ ಗಾಯ | ಜನತಾ ನ್ಯೂಸ್
ಜೈಪುರ : ರಾಜಸ್ಥಾನದ ಜೈಪುರದಲ್ಲಿ ಸಂಭವಿಸಿದ ಒಂದು ದೊಡ್ಡ ದುರಂತದಲ್ಲಿ, ಅಂಬರ್ ಕೋಟೆ ಬಳಿಯ ಬೆಟ್ಟದ ಮೇಲೆ ಸಿಡಿಲು ಬಡಿದು 11 ಜನರು, ಹೆಚ್ಚಾಗಿ ಯುವಕರು ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದಾರೆ.
ಭಾನುವಾರ ನಡೆದ ಸಿಡಿಲು ಬಡೆದ ಪರಿಣಾಮ ಏಳು ಮಕ್ಕಳು ಸೇರಿದಂತೆ ಒಟ್ಟು ಹದಿನೆಂಟು ಜನರು ಸಾವನ್ನಪ್ಪಿರುವ ಪ್ರತ್ಯೇಕ ಘಟನೆಗಳು ರಾಜಸ್ಥಾನದ ಜೈಪುರ, ಕೋಟಾ, ಝಾಲಾವರ್ ಮತ್ತು ಧೋಲ್ಪುರ್ ಜಿಲ್ಲೆಗಳಲ್ಲಿ ವರದಿಯಾಗಿದೆ.
ಜೈಪುರನ ಅಂಬರ್ ಕೋಟೆ ಬಳಿ ಸಿಡಿಲಿನ ಹೊಡೆತಕ್ಕೆ ಹನ್ನೊಂದು ಪ್ರವಾಸಿಗರು ಪ್ರಾಣ ಕಳೆದುಕೊಂಡರು ಮತ್ತು ಇನ್ನೂ ಎಂಟು ಮಂದಿ ಗಾಯಗೊಂಡಿದ್ದಾರೆ. ಈ ಪ್ರವಾಸಿಗರು ಭಾನುವಾರದ ಆಹ್ಲಾದಕರ ಸಂಜೆಯನ್ನು ಆನಂದಿಸುತ್ತಿದ್ದಾಗ ಈ ಘಟನೆ ನಡೆದಿದೆ - ಕೆಲವರು ಸೆಲ್ಫಿ ತೆಗೆದುಕೊಳ್ಳುವಲ್ಲಿ ನಿರತರಾಗಿದ್ದರೆ, ಇತರರು ಮಾತನಾಡುತ್ತ ವಾಚ್ ಟವರ್ ಮತ್ತು ಕೋಟೆಯ ಗೋಡೆಯ ಕುಳಿತಿದ್ದ ಸಂದರ್ಭದಲ್ಲಿ ಭಾರಿ ಸಿಡಿಲು ಬಡಿದಿದೆ. ಘಟನೆ ನಡೆದಾಗ ಸುಮಾರು 27 ಜನರು ವಾಚ್ ಟವರ್ ಮತ್ತು ಕೋಟೆಯ ಗೋಡೆಯ ಮೇಲೆ ಇದ್ದರು, ಎಂದು ವರದಿಯಾಗಿದೆ.
ಸಂಜೆ ತಡವಾಗಿ ಮಿಂಚು ಬಡಿದಾಗ ವಾಚ್ ಟವರ್ನಲ್ಲಿದ್ದವರಲ್ಲಿ ಕೆಲವರು ಬೆಟ್ಟದ ಮೇಲಿರುವ ಈ ಕೋಟೆಯಿಂದ ಕೆಳಕ್ಕೆ ಬಿದ್ದರು, ಎಂದು ಅವರು ಹೇಳಲಾಗಿದೆ. ಬೆಟ್ಟದಿಂದ ಬಿದ್ದು ಗಾಯಗೊಂಡ ಇತರ ಜನರನ್ನು ಹುಡುಕಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ, ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ವಿವಿಧ ಹಳ್ಳಿಗಳಲ್ಲಿ ನಡೆದ ಪ್ರತ್ಯೇಕ ಸಿಡಿಲಿನ ಘಟನೆಯಲ್ಲಿ ಆರು ಮಕ್ಕಳು ಸೇರಿದಂತೆ ಇಪ್ಪತ್ತೊಂದು ಜನರು ಗಾಯಗೊಂಡಿದ್ದಾರೆ, ಎಂದು ಅವರು ಹೇಳಿದರು.