ಕೋವಿಡ್ 2ನೇ ಅಲೆ ನಿಯಂತ್ರಣದಲ್ಲಿ ಉತ್ತರ ಪ್ರದೇಶಕ್ಕೆ ಸರಿಸಾಟಿಯಾರಿಲ್ಲ - ಪ್ರಧಾನಿ ಮೋದಿ | ಜನತಾ ನ್ಯೂಸ್
ವಾರಾಣಸಿ : ಕೋವಿಡ್-19 ಪ್ರಕರಣಗಳ ಎರಡನೇ ತರಂಗವನ್ನು ನಿರ್ವಹಿಸುವಲ್ಲಿ ಉತ್ತರ ಪ್ರದೇಶ(ಯುಪಿ)ಕ್ಕೆ ಯಾರು "ಸಾಟಿಯಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಬೆಳಿಗ್ಗೆ ತಮ್ಮ ವಾರಣಾಸಿ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಘೋಷಿಸಿದ್ದಾರೆ.
"ಮೊದಲ ಅಲೆಯ ದಾಖಲೆಯ ಏಕದಿನ ಗರಿಷ್ಠ 7,016 ಪ್ರಕರಣಗಳಿಂದ ಮೇಲೇರಿ, ಎರಡನೇ ತರಂಗದ ಸಂದರ್ಭದಲ್ಲಿ ಗರಿಷ್ಠ ದಾಖಲೆ ಪ್ರತಿದಿನ 30,000 ಹೊಸ ಪ್ರಕರಣಗಳು ದಾಖಲಾಗಿದ್ದರೂ, ಯುಪಿ ಎದ್ದು ನಿಂತು ವೈರಸ್ ಎದುರು ಸಮರ್ಥವಾಗಿ ಹೋರಾಡಿದೆ". ರಾಜ್ಯದ ಸಾಂಕ್ರಾಮಿಕ ರೋಗದ ನಿರ್ವಹಣೆ "ಪ್ರಶಂಸೆಗೆ ಅರ್ಹವಾಗಿದೆ", ಎಂದು ಪ್ರಧಾನಿ ಹೇಳಿದರು.
"ಭಾರತದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶ, ಎದ್ದುನಿಂತು ವೈರಸ್ ಎದುರು ಸಮರ್ಥವಾಗಿ ಹೋರಾಡಿದೆ. ಅಲ್ಲದೇ, ಸಾಂಕ್ರಾಮಿಕ ರೋಗವನ್ನು ಉತ್ತರ ಪ್ರದೇಶವು ನಿಭಾಯಿಸಿದ ಮತ್ತು ನಿಯಂತ್ರಿಸಿದ ರೀತಿ ಪ್ರಶಂಸೆಗೆ ಅರ್ಹವಾಗಿದೆ. ಕೋವಿಡ್-19 ರ ಎರಡನೇ ತರಂಗವನ್ನು ಯುಪಿ ನಿರ್ವಹಿಸಿರುವ ರೀತಿಗೆ ಸರಿಸಾಟಿಯಿಲ್ಲ", ಎಂದು ಪ್ರಧಾನಿ ಮೋದಿ ಹೇಳಿದರು.
ಆರೋಗ್ಯ ಮತ್ತು ರಾಜ್ಯದ ಮುಂಚೂಣಿ ಕಾರ್ಮಿಕರ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಪ್ರಧಾನಿ ಮೋದಿ, "ದೇಶದಲ್ಲೇ ಅತಿ ಹೆಚ್ಚು ಸಂಖ್ಯೆಯ ಲಸಿಕಾಕರಣ ದಾಖಲಿಸಿದ್ದಕ್ಕಾಗಿ ಯುಪಿಯನ್ನು ಶ್ಲಾಘಿಸಿದರು.
ಕೇಂದ್ರದ ಕೋವಿನ್ ಪ್ಲಾಟ್ಫಾರ್ಮ್ನ ದತ್ತಾಂಶದ ಪ್ರಕಾರ ಯುಪಿ ಇದುವರೆಗೆ 3.89 ಕೋಟಿ ಡೋಸ್ಗಳನ್ನು ನೀಡುವಲ್ಲಿ ಸಫಲವಾಗಿದೆ.
"ಎಲ್ಲಾ ಕರೋನಾ ಯೋಧರು ಮತ್ತು ಈ ಪ್ರಯತ್ನದ ಸಮಯದಲ್ಲಿ ಬಂದು ಸಹಾಯ ಮಾಡಿದ ಎಲ್ಲರಿಗೂ ನಾನು ಅಪಾರವಾಗಿ ಕೃತಜ್ಞನಾಗಿದ್ದೇನೆ ಮತ್ತು ಆಭಾರಿಯಾಗಿದ್ದೇನೆ. ಇಂದು ಯುಪಿ ದೇಶದಲ್ಲಿ ಗರಿಷ್ಠ ವ್ಯಾಕ್ಸಿನೇಷನ್ ಮಾಡಿದೆ. ಎಲ್ಲರಿಗೂ ಲಸಿಕೆ ... ಉಚಿತ ಲಸಿಕೆ. .. ಇದು ಸರ್ಕಾರದ ಗುರಿ ಮತ್ತು ಅದನ್ನು ಮಾಡಲಾಗುತ್ತಿದೆ", ಎಂದು ಪ್ರಧಾನಿ ಹೇಳಿದರು.