ಹೊರ ರಾಜ್ಯಗಳಿಂದ ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್, ಪಿಸ್ತೂಲ್, ಸಜೀವ ಗುಂಡುಗಳು ಜಪ್ತಿ! | ಜನತಾ ನ್ಯೂಸ್
ಬೆಂಗಳೂರು : ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ನಾಲ್ವರು ಅಂತಾರಾಜ್ಯ ಶಸ್ತ್ರಾಸ್ತ್ರ ಪೂರೈಕೆದಾರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅಯಾಜ್ ಉಲ್ಲಾ, ಸೈಯದ್ ಸಿರಾಜ್, ಮೊಹಮ್ಮದ್ ಅಲಿ ಮತ್ತು ಅರುಣ್ ಕುಮಾರ್ ಎಂಬುವವರು ಬಂಧಿತ ಆರೋಪಿಗಳು. ಆರೋಪಿ ಅಯಾಜ್ ಪಿಸ್ತೂಲ್, ಬಂದೂಕನ್ನು ಉತ್ತರ ಪ್ರದೇಶ, ಪಂಜಾಬ್ ಮತ್ತು ಮಹಾರಾಷ್ಟ್ರದಿಂದ ಬೆಂಗಳೂರಿಗೆ ತರುತಿದ್ದ. ಅಯಾಜ್ ಬಳಿ ಸೈಯದ್ ಮತ್ತು ರೌಡಿಶೀಟರ್ ಮೊಹಮ್ಮದ್ ಅಲಿ ಸಹ ಪಿಸ್ತೂಲ್ ಮತ್ತು ಬಂದೂಕನ್ನು ಖರೀದಿಸಿದ್ದರು.
ಅಯಾಜುಲ್ಲಾ ವಿವಿಧ ರಾಜ್ಯಗಳಿಂದ ಪಿಸ್ತೂಲ್ಗಳನ್ನು ತರಿಸಿಕೊಂಡು ಮಹಮದ್ ಅಲಿಗೆ ಮಾರಾಟ ಮಾಡುತ್ತಿದ್ದ. ಜೊತೆಗೆ ಈ ಹಿಂದೆ ಎರಡು ಡಕಾಯಿತಿ ಕೇಸ್ನಲ್ಲಿ ಭಾಗಿಯಾಗಿದ್ದ. ಸೈಯದ್ ಸಿರಾಜ್ ಕೂಡ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿ ಈ ಹಿಂದೆ ಅರೆಸ್ಟ್ ಆಗಿದ್ದ.
ಶಿವಾಜಿನಗರದ ರೌಡಿಶೀಟರ್ ಮಹಮದ್ ಅಲಿ ಕೂಡ ಅಯಾಜುಲ್ಲಾನಿಂದ ಹಲವು ಪಿಸ್ತೂಲ್ಗಳನ್ನು ಖರೀದಿಸಿದ್ದ. ಇನ್ನು ತುಮಕೂರಿನ ರೌಡಿಶೀಟರ್ ಆಗಿದ್ದ ಅರುಣ್ ಕುಮಾರ್ ಅಲಿಯಾಸ್ ಲಾಂಗ್ ಅರುಣ್, ಸೈಯದ್ ಸಿರಾಜ್ನಿಂದ ಒಂದು ಕಂಟ್ರಿ ಮೇಡ್ ಪಿಸ್ತೂಲ್ ಪಡೆದುಕೊಂಡಿದ್ದ ಎಂಬ ಮಾಹಿತಿ ತಿಳಿದುಬಂದಿದೆ.
ತುಮಕೂರು ರೌಡಿ ಶೀಟರ್ ಆರೋಪಿ ಅರುಣ್ ಕುಮಾರ್ ಕೊಲೆ ಸೇರಿ ಹಲವು ಕೇಸ್ಗಳಲ್ಲಿ ಭಾಗಿಯಾಗಿದ್ದವನು. ರೌಡಿಶೀಟರ್ ಅರುಣ್ ಕಂಟ್ರಿಮೇಡ್ ಪಿಸ್ತೂಲ್ ಪಡೆದಿದ್ದ. ಬಂಧಿತರಿಂದ ಕಂಟ್ರಿಮೇಡ್ ಪಿಸ್ತೂಲ್, ಕಂಟ್ರಿಮೇಡ್ ರೈಫಲ್ ಸೇರಿ 7 ಆಯುಧಗಳು ಮತ್ತು 19 ಸಜೀವ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.