ನನಗೆ ನಿಮ್ಮ ನೆಹರೂರರನ್ನು ನೋಡಿಯೇ ಹುಕ್ಕಾ ಬಾರ್ ನೆನಪಾಗಿದ್ದು, ಇಂದಿರಾ ಗಾಂಧಿ ಹೆಸರಿಟ್ಟಿದ್ದು ಯಾವ ಪುರುಷಾರ್ಥಕ್ಕಾಗಿ? | ಜನತಾ ನ್ಯೂಸ್
ಬೆಂಗಳೂರು : ಕಾಂಗ್ರೆಸ್ ನವರು ತಮ್ಮ ಕಚೇರಿಗಳಲ್ಲಿ ನೆಹರು ಹೆಸರಲ್ಲಿ ಹುಕ್ಕಾ ಬಾರ್ ತೆರೆಯಲಿ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಇದೀಗ ಮತ್ತೆ ವಿವಾದಕ್ಕೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ನೆಹರು ಹುಕ್ಕಾ ಸೇದುತ್ತಿದ್ದದ್ದು ತಪ್ಪೋ? ರವಿ ಹೇಳಿದ್ದು ತಪ್ಪೋ? ನೆಹರು ಹುಕ್ಕಾ ಸೇದುವ ನೂರಾರು ಫೋಟೋಗಳಿವೆ. ಸ್ವತಃ ಸಿದ್ದರಾಮಯ್ಯ, ಸಿ.ಎಂ.ಇಬ್ರಾಹಿಂ ನೆಹರು, ಇಂದಿರಾ ಬಗ್ಗೆ ಮಾತನಾಡಿರುವುದನ್ನು ಹೊರಗೆ ಬಿಡಲೇ? ಇಬ್ರಾಹಿಂ ಅವರು ಇಂದಿರಾ ಅವರನ್ನು ಏನಂತ ಕರೆದರು? ನಾನು ನೆಹರು, ಇಂದಿರಾ ಬಗ್ಗೆ ಮಾತನಾಡಿದ್ದಕ್ಕೆ ಕಾಂಗ್ರೆಸ್ ನವರು ಉರಿ ಹತ್ತಿಸಿಕೊಂಡಿದ್ದಾರೆ. ನನ್ನ ಮೇಲೆಯೇ ಕಾಂಗ್ರೆಸ್ ನವರಿಗೆ ಇಷ್ಟೊಂದು ದ್ವೇಷ ಇರುವಾಗ ಇನ್ನು ಕಾಂಗ್ರೆಸ್ ನವರಿಗೆ ನೆಹರು ಬಗ್ಗೆ ಇನ್ನೆಷ್ಟು ದ್ವೇಷ ಇರಬೇಡ ಎಂದು ಪ್ರಶ್ನಿಸಿದ್ದಾರೆ.
ನನಗೆ ಕುಡಿಯೋ ಅಭ್ಯಾಸವಿಲ್ಲ, ಕುಡುಕನ ಪಟ್ಟ ಕಟ್ಟಿದರು. ಆದರೆ ಪ್ರತಿದಿನ ಕುಡಿಯುವವರು ಅವರೇ. ನಾನು ಮುಂಜಾನೆ 5 ಗಂಟೆಗೆ ಎದ್ದು ಯೋಗ ಮಾಡುತ್ತೇನೆ. ದಿನದ 24 ಗಂಟೆ ಪಕ್ಷ, ಸಮಾಜ, ರಾಷ್ಟ್ರದ ಬಗ್ಗೆ ಚಿಂತನೆ ಮಾಡುತ್ತಾ ಸದಾ ಸಕ್ರಿಯನಾಗಿರುತ್ತೇನೆ. ಆದರೆ ಅವರು ಏನೇನು ಮಾಡುತ್ತಾರೆ? ಅವರ ಹಳೆಯ ಕಥೆಗಳೇನು ಎಂಬುದನ್ನು ಹೇಳಲೇ? ಅವರ ಮಟ್ಟಕ್ಕೆ ನಾನು ಇಳಿದಿಲ್ಲ. ನಾನು ಆರ್.ಎಸ್.ಎಸ್ ಸ್ವಯಂ ಸೇವಕ. ಕೊತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಗೆ ಪರೋಕ್ಷ ತಿರುಗೇಟು ನೀಡಿದ್ದಾರೆ.
ಸಿಟಿ ರವಿ ಅವರ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಇದೀಗ ಮತ್ತೆ ಟ್ವೀಟ್ ಮಾಡಿರುವ ಸಿಟಿ ರವಿ, "ಮಾನ್ಯ ಸಿದ್ದರಾಮಯ್ಯನವರೇ, ನನಗೆ ನಿಮ್ಮ ನೆಹರೂರವರನ್ನು ನೋಡಿಯೇ ಹುಕ್ಕಾ ಬಾರ್ ನೆನಪಾಗಿದ್ದು" ಎಂದು ಹೇಳಿದ್ದಾರೆ.
"ಕ್ಯಾಂಟೀನ್ ಗೆ ಅನ್ನಪೂರ್ಣೇಶ್ವರಿ ಎಂದು ಹೆಸರಿಟ್ಟಿದ್ದರೆ ಬಡವರ ಹಸಿವು ನೀಗುತ್ತಿರಲಿಲ್ಲವೇ?ನಿಮ್ಮನ್ನು ನೋಡಿದಾಗ ನಿಮ್ಮ ಸ್ನೇಹಿತರು ಹೇಳುತ್ತಿದ್ದ ನಿಮ್ಮ ಬ್ರಾಂಡ್ ನೆನಪಾಯಿತು" ಎಂದು ಬರೆದುಕೊಂಡಿದ್ದಾರೆ.
ಸಿಟಿ ರವಿಗೆ ಅವರ ಸಂಸ್ಕೃತಿಗೆ ತಕ್ಕ ಹಾಗೆ ಹುಕ್ಕಾ ಬಾರ್ ನೆನಪಾಗಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಟಿ ರವಿ, "ಇಂದಿರಾ ಗಾಂಧಿ ಹೆಸರಿಟ್ಟಿದ್ದು ಯಾವ ಪುರುಷಾರ್ಥಕ್ಕಾಗಿ?" ಎಂದು ಪ್ರಶ್ನಿಸಿದ್ದಾರೆ.
ಮಾನ್ಯ @siddaramaiah ನವರೇ, ನನಗೆ ನಿಮ್ಮ ನೆಹರೂರವರನ್ನು ನೋಡಿಯೇ ಹುಕ್ಕಾ ಬಾರ್ ನೆನಪಾಗಿದ್ದು.
— C T Ravi 🇮🇳 ಸಿ ಟಿ ರವಿ (@CTRavi_BJP) August 13, 2021
ನಿಮ್ಮನ್ನು ನೋಡಿದಾಗ ನಿಮ್ಮ ಸ್ನೇಹಿತರು ಹೇಳುತ್ತಿದ್ದ ನಿಮ್ಮ ಬ್ರಾಂಡ್ ನೆನಪಾಯಿತು.
ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಹೆಸರಿಟ್ಟಿದ್ದರೆ ಬಡವರ ಹಸಿವು ನೀಗುತ್ತಿರಲಿಲ್ಲವೇ?
ಇಂದಿರಾ ಗಾಂಧಿ ಹೆಸರಿಟ್ಟಿದ್ದು ಯಾವ ಪುರುಷಾರ್ಥಕ್ಕಾಗಿ? https://t.co/x8CZuF76Hk pic.twitter.com/Ub7RTP0WUN