ಬಿಜೆಪಿ ಅವರು ಏನಾದರೂ ಮಾಡಲಿ, ನಮ್ಮ ಪಕ್ಷಕ್ಕೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ | ಜನತಾ ನ್ಯೂಸ್
ಬೆಂಗಳೂರು : ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಶುಕ್ರವಾರ ಎಂ.ಎಸ್.ರಕ್ಷಾ ರಾಮಯ್ಯ ಅಧಿಕಾರ ವಹಿಸಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಎಐಸಿಸಿ ಪದಾಧಿಕಾರಿಗಳು ಭಾಗವಹಿಸಿದ್ದರು.
ಸಮಾರಂಭದಲ್ಲಿ ಮಾತನಾಡಿದ ಅವರು, ಪಕ್ಷದ ಸಂಘಟನೆಗೆ ಎಷ್ಟು ಯುವಕರನ್ನು ಸೇರ್ಪಡೆ ಮಾಡುತ್ತೀರಿ ಎಂಬುದು ಮುಖ್ಯ. ಬಿಜೆಪಿಯ ತತ್ವ-ಸಿದ್ಧಾಂತ ಹಾಗೂ ಆಡಳಿತ ಲೋಪಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.ಅವರು ಏನಾದರೂ ಮಾಡಲಿ, ಪಕ್ಷಕ್ಕೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
ನಿನ್ನೆ ಆದದ್ದು, ನಾಳೆ ಆಗುವುದನ್ನು ಯಾರೂ ನಿರೀಕ್ಷಿಸಲು ಸಾಧ್ಯವಿಲ್ಲ. ಇಂದಿನ ಸಂಘಟನೆ ನಿಮ್ಮ ಕೈಯಲ್ಲಿದೆ. ಸದ್ಬಳಕೆ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.
ಯುವನಾಯಕರ ಸೇವೆಯನ್ನು ಪಕ್ಷ ಸದ್ಬಳಕೆ ಮಾಡಿಕೊಳ್ಳಲಿದೆ. ಮೊದಲು ನಿಮ್ಮನ್ನು ನೀವು ಗುರುತಿಸಿಕೊಳ್ಳುವ ಪ್ರಯತ್ನ ಮಾಡಿ, ಅವಕಾಶವನ್ನ ಪಕ್ಷ ನೀಡಲಿದೆ. ನಿಮ್ಮದೇ ಆದ ಒಂದು ಪ್ರತ್ಯೇಕ ಪ್ರಬಲ ಸಂಘಟನೆಯನ್ನು ಮಾಡಿಕೊಳ್ಳಿ. ಡಿಜಿಟಲ್ ಯುವಸಮುದಾಯ ಕಟ್ಟುವ ಕಾರ್ಯ ನಿಮ್ಮದಾಗಲಿ ಎಂದರು.