ರಾಜ್ಯದಲ್ಲಿಂದು 1350 ಪ್ರಕರಣ ಪತ್ತೆ, 18 ಮಂದಿ ಸಾವು! | ಜನತಾ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ ಇಂದು ಹೊಸದಾಗಿ 1350 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಿಂದ 18 ಜನರು ಮೃತ ಪಟ್ಟಿದ್ದಾರೆ ಎದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
ಇವತ್ತು 1648 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 28,79,433 ಜನ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇಂದು 18 ಜನ ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 37,123 ಜನ ಮೃತಪಟ್ಟಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.85 ರಷ್ಟು ಇದೆ. 20,845 ಸಕ್ರಿಯ ಪ್ರಕರಣಗಳಿವೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 260 ಜನರಿಗೆ ಸೋಂಕು ತಗುಲಿದ್ದು 374 ಜನ ಬಿಡುಗಡೆಯಾಗಿದ್ದಾರೆ. 7797 ಸಕ್ರಿಯ ಪ್ರಕರಣಗಳು ಇವೆ. ಇಂದು ಓರ್ವ ಸೋಂಕಿತ ಮೃತಪಟ್ಟಿದ್ದಾರೆ.
ಬಾಗಲಕೋಟೆ-1, ಬಳ್ಳಾರಿ-2, ಬೆಳಗಾವಿ-43, ಬೆಂಗಳೂರು ಗ್ರಾಮಾಂತರ-5, ಬೆಂಗಳೂರು ನಗರ-260, ಬೀದರ್-1, ಚಾಮರಾಜನಗರ-6, ಚಿಕ್ಕಬಳ್ಳಾಪುರ-2, ಚಿಕ್ಕಮಗಳೂರು-17, ಚಿತ್ರದುರ್ಗ-16, ದಕ್ಷಿಣ ಕನ್ನಡ-320, ದಾವಣಗೆರೆ-15, ಧಾರವಾಡ-5, ಗದಗ-2, ಹಾಸನ-101, ಹಾವೇರಿ-0, ಕಲಬುರಗಿ-2, ಕೊಡಗು-63, ಕೋಲಾರ-17, ಕೊಪ್ಪಳ-0, ಮಂಡ್ಯ-26, ಮೈಸೂರು-102, ರಾಯಚೂರು-0, ಶಿವಮೊಗ್ಗ-50, ತುಮಕೂರು-68, ಉಡುಪಿ-177, ಉತ್ತರ ಕನ್ನಡ-40, ವಿಜಯಪುರ-6, ಯಾದಗಿರಿ-0.
ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ:
ಬಳ್ಳಾರಿ 1, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 1, ಬೆಮಗಳೂರು ನಗರ 1, ದಕ್ಷಿಣ ಕನ್ನಡ 4, ದಾವಣಗೆರೆ 1, ಹಾಸನ 2, ಹಾವೇರಿ 1, ಕೋಲಾರ 2, ಮೈಸೂರು 1, ರಾಮನಗರ 1, ಶಿವಮೊಗ್ಗ 2 ಸೇರಿ 18 ಸೋಂಕಿತರು ಮತಪಟ್ಟಿದ್ದಾರೆ.