ಥಿಯೇಟರ್ ಬಂದ್ ಹೈ, ಪಿಚ್ಚರ್ ಕೈಸೆ ಚಾಲೂ ಹೋತಾ ಹೈ? ಆನಂದ್ ಸಿಂಗ್ ಗೆ ರಾಜೂ ಗೌಡ ಪ್ರಶ್ನೆ | ಜನತಾ ನ್ಯೂಸ್
ಬೆಂಗಳೂರು : ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್ ಗೆ ಅವರದ್ದೇ ಪಕ್ಷದ ಇನ್ನೋರ್ವ ಸಚಿವಾಕಾಂಕ್ಷಿ ರಾಜುಗೌಡ ಥಿಯೇಟರ್ ಬಂದ್ ಹೈ ತೋ, ಪಿಚ್ಚರ್ ಕೇಸಾ ಚಾಲೂ ಹೋತಾ ಹೈ ಎಂದು ಕಾಲೆಳೆದಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್ ಸಿಂಗ್ ಪಿಚ್ಚರ್ ಅಭೀ ಬಿ ಬಾಕಿ ಹೈ ಎಂದು ಹೇಳಿರುವುದನ್ನು ನಾನು ನೋಡಿದೆ. ಅವರಿಗೆ ಫೋನ್ ಮಾಡಿ, ಪಿಚ್ಚರ್ ಅಭಿ ಬಾಕಿ ಹೈ ಎಂದು ಹೇಳಿದ್ದೀರಿ. ಆದರೆ ಕರೊನಾದಿಂದ ಥಿಯೇಟರ್ ಎಲ್ಲ ಬಂದ್ ಆಗಿವೆ ಎಂದು ಅವರಿಗೆ ತಮಾಷೆ ಮಾಡಿದೆ ಎಂದರು.
ಆನಂದ್ ಸಿಂಗ್ ಅವರು ಸಮಾಧಾನ ಆಗಿಯೇ ಇದ್ದಾರೆ. ಅವರಿಗೆ ಖಾತೆ ಹಂಚಿಕೆಯಲ್ಲಿ ಅಸಮಾಧಾನ ಇದ್ದಿದ್ದು ನಿಜವಾದರೂ ನಾವೆಲ್ಲ ಸ್ನೇಹಿತರು ಅವರೊಂದಿಗೆ ಮಾತನಾಡಿ ಸಮಾಧಾನಿಸಿದ್ದೇವೆ. ಸಚಿವ ಸ್ಥಾನದಲ್ಲಿ ಮುಂದುವರೆಯುವಂತೆ ನಾವೆಲ್ಲ ಸಲಹೆ ನೀಡಿದ್ದೇವೆ. ಆನಂದ್ ಸಿಂಗ್ ಖಾತೆ ಅಸಮಾಧಾನ ವಿಚಾರವನ್ನು ದೆಹಲಿಯ ವರಿಷ್ಠರ ಬಳಿಯಲ್ಲಿ ಚರ್ಚಿಸದೇ ಸಿಎಂ ಬೊಮ್ಮಾಯಿ ಅವರ ಬಳಿಯೇ ಚರ್ಚಿಸಿ ಬಗೆಹರಿಸಿಕೊಳ್ಳುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.