7 ಲಕ್ಷ ರೂಪಾಯಿ ಮೌಲ್ಯದ ಶ್ರೀಗಂಧ ವಶ! | ಜನತಾ ನ್ಯೂಸ್
ಶಿವಮೊಗ್ಗ : ಅರಣ್ಯ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಶ್ರೀಗಂಧದ ಮರದ ತುಂಡುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮಿನಕೊಪ್ಪ ಗ್ರಾಮದ ಹೆಮ್ಮಣ್ಣ( 40) ಬಂಧಿತ ಆರೋಪಿ.
ಶ್ರೀಗಂಧ ಮರ ಕಡಿದು, ಬಳಿಕ ಅದನ್ನು ತುಂಡುಗಳನ್ನು ಮಾಡಿ ಈತ ಮಾರಾಟ ಮಾಡುತ್ತಿದ್ದ. ಬೈಕ್ ಮೇಲೆ ಸುಮಾರು 60 ಕೆಜಿ ಶ್ರೀಗಂಧ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದನು. ಶಂಕರ ವಲಯ ಆರ್ಎಫ್ಓ ಗಿರೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುವಾಗ ಈತ ಸಿಕ್ಕಿಬಿದ್ದಿದ್ದಾನೆ.
ಬಂಧಿತನಿಂದ ಒಂದು ಲಕ್ಷ ರೂಪಾಯಿ ಮೌಲ್ಯದ 1 ಬೈಕ್, 60 ಕೆಜಿಯಷ್ಟು ಗಂಧ ಹಾಗೂ ಅಕೇಶಿಯ ಮರದ ತುಂಡುಗಳು, ತೂಕದ ತಕ್ಕಡಿ, ಗರಗಸ, ಕೊಡಲಿಗಳನ್ನು ಸೇರಿ ಒಟ್ಟು ಏಳು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.