ನನಗೆ ಮೊದಲೇ ಮದುವೆಯಾಗಿದೆ ಎಂದ ಯುವತಿಯ ಕತ್ತು ಕೊಯ್ದು ಪ್ರಿಯಕರ! | ಜನತಾ ನ್ಯೂಸ್
ಬೆಂಗಳೂರು : ಅಕ್ರಮ ಸಂಬಂಧ ಹಿನ್ನೆಲೆ ವಿವಾಹಿತ ಮಹಿಳೆಯ ಕೊಲೆ ಮಾಡಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ವತಃ ಸ್ನೇಹಿತನೇ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಆಂಧ್ರ ಮೂಲದ ದೊಡ್ಡಬೆಲೆ ರಸ್ತೆ ನಿವಾಸಿ ಅನಿತ(23) ಕೊಲೆಯಾದ ಯುವತಿ. ವೆಂಕಟೇಶ್ (27) ಬಂಧಿತ ಆರೋಪಿ. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ದೊಡ್ಡಬೆಲೆ ಮುಖ್ಯರಸ್ತೆಯ ಬೃಂದಾವನ ಲೇಔಟ್ ಬಳಿ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ವೆಂಕಟೇಶ್ ಚಾಕುವಿನಿಂದ ಕತ್ತು ಸೀಳಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅನಿತಾಳನ್ನು ಸ್ನೇಹಿತರು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತ್ತಪಟ್ಟಿದ್ದಾಳೆ.
ಘಟನೆ -
ಮೆಡ್ಪ್ಲಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅನಿತ ಅವರನ್ನು ಕಳೆದ ಎರಡುಮೂರು ವರ್ಷಗಳಿಂದ ವೆಂಕಟೇಶ್ ಎಂಬಾತ ಪ್ರೀತಿಸುತ್ತಿದ್ದನು.
ಇತ್ತೀಚೆಗೆ ಅನಿತ ಕುಟುಂಬದವರು ವೆಂಕಟೇಶ್ನೊಂದಿಗೆ ಮದುವೆ ಮಾಡಲು ನಿರಾಕರಿಸಿದ್ದರು. ಈ ವಿಷಯವನ್ನು ಅನಿತ ವೆಂಕಟೇಶ್ನಿಗೆ ತಿಳಿಸಿ ಬೇರೆ ಯುವತಿಯನ್ನು ಮದುವೆ ಮಾಡಿಕೊಳ್ಳುವಂತೆ ಹೇಳಿದ್ದಾಳೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ಬೇರೆ ಮದುವೆಯಾಗದಂತೆ ವೆಂಕಟೇಶ್ ತಾಕೀತು ಮಾಡಿದ್ದ.
ಇದರಿಂದ ಕೋಪಗೊಂಡಿದ್ದ ವೆಂಕಟೇಶ್ ಇಂದು ಬೆಳಗ್ಗೆ 7.15ರಲ್ಲಿ ಅನಿತ ಕೆಲಸಕ್ಕೆ ಹೋಗುವುದನ್ನೇ ಕಾದಿದ್ದು, ದೊಡ್ಡಬೆಲೆ ರಸ್ತೆ ಬೃಂದಾವನ ನಗರದಲ್ಲಿ ನಡೆದು ಹೋಗುತ್ತಿದ್ದ ಆಕೆಯನ್ನು ಹಿಂಬಾಲಿಸಿ ಚಾಕುವಿನಿಂದ ಕತ್ತು ಕೊಯ್ದಿದ್ದಾನೆ.
ವೆಂಕಟೇಶ್ ಮಾರ್ಕೆಟ್ಗೆ ಹೋಗಿ 80 ರೂ. ಕೊಟ್ಟು ಚಾಕು ಖರೀದಿಸಿ ತಂದು ಅನಿತಾಳನ್ನು ಕೊಲೆ ಮಾಡಿದ್ದಾನೆ. ಆ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತದೇಹವನ್ನು ರಾಜರಾಜೇಶ್ವರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವೆಂಕಟೇಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.