ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ಕಿಚ್ಚ ಸುದೀಪ್; ಫೋಟೋ ವೈರಲ್ | ಜನತಾ ನ್ಯೂಸ್
ಬೆಂಗಳೂರು : ನಟ ಕಿಚ್ಚ ಸುದೀಪ್ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ್ದಾರೆ.
ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಅವರು ಸಿಎಂ ಭೇಟಿ ಮಾಡಿರುವುದು ಯಾಕೆ ಎಂಬ ಕುತೂಹಲದ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ. ಅದಕ್ಕೂ ಉತ್ತರ ಸಿಕ್ಕಿದೆ. ಇದೊಂದು ಸೌಹಾರ್ದಯುತ ಭೇಟಿ ಮಾತ್ರ ಎನ್ನಲಾಗಿದೆ.
ಬಸವರಾಜ ಬೊಮ್ಮಾಯಿ ಸಿಎಂ ಆಗುವುದಕ್ಕಿಂತ ಮುಂಚೇನು, ನಟ ಸುದೀಪ್ ಜೊತೆ ಒಳ್ಳೆ ಒಡನಾಟ ಹಾಗೂ ಸ್ನೇಹತ್ವವನ್ನ ಬಸವರಾಜ ಬೊಮ್ಮಾಯಿ ಹೊಂದಿದ್ದಾರೆ. ಈ ಸ್ನೇಹ, ಸಂಬಂಧದಿಂದ, ಬೊಮ್ಮಾಯಿ, ಸುದೀಪ್ ಅವರನ್ನು ಭೇಟಿ ಮಾಡೋದಕ್ಕೆ ಆಹ್ವಾನ ಕೊಟ್ಟಿದ್ದರಂತೆ.
ಮತ್ತೊಂದು ಕಡೆ ಸುದೀಪ್ ಕೂಡ, ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿ ಆದಾಗಿನಿಂದ, ಅವ್ರಿಗೆ ಶುಭಾಶಯ ಹೇಳಲು ಆಗಿರಲಿಲ್ಲ. ಹೀಗಾಗಿ ಆರ್ ಟಿ ನಗರದಲ್ಲಿರುವ, ಸಿಎಂ ಮನೆಗೆ ಭೇಟಿ ನೀಡಿ, ಅವರ ಜೊತೆ ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆ ಸೌಹಾರ್ದ ಮಾತುಕತೆ ಎನ್ನಲಾಗಿದೆ.
ರಾಜಕೀಯಕ್ಕೂ ಚಿತ್ರರಂಗಕ್ಕೂ ಹತ್ತಿರದ ನಂಟು. ಅಂದಹಾಗೆ, ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗುವುದಕ್ಕಿಂತಲೂ ಮುನ್ನವೇ ಸುದೀಪ್ ಕುಟುಂಬದ ಜೊತೆ ಅವರು ಸ್ನೇಹ ಹೊಂದಿದ್ದರು. ಅಷ್ಟೇ ಅಲ್ಲ, ಸುದೀಪ್ ವೃತ್ತಿಜೀವನದ ಆರಂಭದ ದಿನಗಳಲ್ಲಿ ಬಸವರಾಜ ಬೊಮ್ಮಾಯಿ ಬೆಂಬಲವಾಗಿ ನಿಂತಿದ್ದರು. ಆ ಬಗ್ಗೆ ಸುದೀಪ್ ಅವರು ಇತ್ತೀಚೆಗೆ ಟ್ವೀಟ್ ಮಾಡಿದ್ದರು.