ಹೃದಯಾಘಾತದಿಂದ ನ್ಯಾಯಾಲಯದ ಆವರಣದಲ್ಲೇ ನಗರಸಭಾ ಸದಸ್ಯ ಸಾವು | ಜನತಾ ನ್ಯೂಸ್
ಚಾಮರಾಜನಗರ : ಚಾಮರಾಜನಗರ ನಗರ ಸಭೆಯ ಎಸ್ಡಿಪಿಐ ಸದಸ್ಯ ಸಮೀವುಲ್ಲಾ ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದಾರೆ .
ಸಮೀವುಲ್ಲಾ ಅವರಿಗೆ 45 ವರ್ಷ ವಯಸ್ಸಾಗಿತ್ತು. ಚಾಮರಾಜನಗರ ನಗರ ಸಭೆಗೆ 6 ನೇ ವಾರ್ಡ್ ಗೆ ಎಸ್ಡಿಪಿಐ ಯಿಂದ ಚುನಾಯಿತರಾಗಿದ್ದ ಸಮೀವುಲ್ಲಾ, ಪಕ್ಷದ ಜಿಲ್ಲಾ ಉಪಾಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದರು
ಪ್ರಕರಣವೊಂದರ ಸಲುವಾಗಿ ನಗರದ ನ್ಯಾಯಾಲಯಕ್ಕೆ ಸಮೀವುಲ್ಲಾ ಖಾನ್ ಹಾಜರಾಗಿದ್ದರು. ಕಲಾಪ ಆರಂಭವಾಗುವ ಮುನ್ನ ನ್ಯಾಯಾಲಯದ ಆವರಣದಲ್ಲಿ ನಿಂತಿದ್ದ ಅವರು ಇದ್ದಕ್ಕಿದ್ದಂತೆ ತೀವ್ರ ಎದೆನೋವು ಎಂದು ಹೇಳಿ ಕುಸಿದು ಬಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ನಂತರ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ವೇಳೆಗೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸಮೀವುಲ್ಲಾ ಅವರಿಗೆ ಹೃದ್ರೋಗವಿದ್ದು ನಾಲ್ಕು ವರ್ಷಗಳ ಹಿಂದೆ ಆಂಜಿಯೋಪ್ಲ್ಯಾಸ್ಟಿ ಮಾಡಲಾಗಿತ್ತು ಎಂದು ಎಸ್ ಡಿ ಪಿ ಐ ಮುಖಂಡ ಆರೀಫ್ ತಿಳಿಸಿದರು.