ವಿದ್ಯುತ್ ತಂತಿ ತಗುಲಿ ಬಾಲಕ ಸಾವು! | ಜನತಾ ನ್ಯೂಸ್
ಹುಬ್ಬಳ್ಳಿ : ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ಘಟನೆ ಹಳೇಹುಬ್ಬಳ್ಳಿಯ ರಾಮನಗರದಲ್ಲಿ ನಡೆದಿದೆ.
ಶಶಾಂಕ ಮಂಜುನಾಥ ಸೋನಾವಣೆ (09) ಮೃತ ಬಾಲಕ. ಶಶಾಂಕ್ ಗೆಳೆಯರ ಜೊತೆ ಪಾಲಿಕೆಯ ಕಟ್ಟಡದ ಮೇಲೆ ಆಟವಾಡುತ್ತಿದ್ದ. ಈ ಸಮಯದಲ್ಲಿ ಕಾಲು ಜಾರಿ ಸರ್ವಿಸ್ ವೈಯರ್ ಮೇಲೆ ಬಿದ್ದ ಪರಿಣಾಮ ಬಾಲಕ ಸಾವನ್ನಪ್ಪಿದ್ದಾನೆ
ಪಾಲಿಕೆ ಕಟ್ಟಡದ ಮೇಲೆ ಕೈಗೆ ತಾಗುವಂತೆ ವಿದ್ಯುತ್ ತಂತಿ ಹಾದು ಹೋಗಿದೆ. ಹಾಗಾಗಿ ಇದನ್ನು ಸ್ಥಳಾಂತರಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ಹೆಸ್ಕಾಂ ಗಮನಹರಿಸಿಲ್ಲ.
ಈ ಅನಾಹುತಕ್ಕೆ ಹೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂದು ಬಾಲಕನ ಪಾಲಕರು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
RELATED TOPICS:
English summary :Hubli