ಅರುಣ್ ಸಿಂಗ್ ವಿರುದ್ಧ ಎಚ್ಡಿಕೆ ನೀಡಿರುವುದು ಚೀಪ್ ರೇಟೆಡ್ ಹೇಳಿಕೆ | ಜನತಾ ನ್ಯೂಸ್
ಬೆಂಗಳೂರು : ಅರುಣ್ ಸಿಂಗ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ, ಯಾವುದೇ ಆಧಾರ ಇಲ್ಲದೆ ಚೀಪ್ ರೇಟೆಡ್ ಹೇಳಿಕೆ ಖಂಡನೀಯ ಎಂದು ಸಚಿವ ಸಿಎನ್ ಅಶ್ವತ್ಥ ನಾರಾಯಣ ಕಿಡಿಕಾರಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೂಟ್ಕೇಸ್ ತೆಗೆದುಕೊಂಡು ಹೋಗುವ ದಲ್ಲಾಳಿ ಎಂಬ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಒಂದು ಪಕ್ಷವಾಗಿ ನಾವು ಪ್ರತಿಪಕ್ಷವನ್ನು ಖಂಡನೆ ಮಾಡುತ್ತೇವೆ. ಜೆಡಿಎಸ್ ಪ್ರಸ್ತುತ ಪಕ್ಷವಲ್ಲ ಎಂಬ ಹೇಳಿಕೆಯನ್ನು ಅರುಣ್ ಸಿಂಗ್ ಕೊಟ್ಟಿದ್ದರು. ಆದರೆ, ಕುಮಾರಸ್ವಾಮಿ ಅರುಣ್ ಸಿಂಗ್ ವಿರುದ್ಧ ವೈಯಕ್ತಿಕ ಅಪಾದನೆ ಮಾಡಿದ್ದಾರೆ ಎಂದರು.
ಯಾವುದಾದರೂ ಆಧಾರ ಇದ್ದರೆ ಬಹಿರಂಗಪಡಿಸಲಿ. ಇದರ ಹೊರತಾಗಿ ಈ ರೀತಿಯ ಆರೋಪ ಕರ್ನಾಟಕದ ಸಂಸ್ಕೃತಿಗೆ ವಿರುದ್ಧವಾಗಿದೆ. ಅವರ ಪಕ್ಷ ಸದೃಢವಾಗಿದ್ದರೆ ತಿಳಿಸಲಿ. ಅದರ ಹೊರತಾಗಿ ಈ ರೀತಿಯ ನಿರಾಧಾರ ಹೇಳಿಕೆ ಕೊಡುವುದು ಸರಿಯಲ್ಲ ಹಾಗೂ ಖಂಡನೀಯ ಎಂದರು.