ಪ್ಯಾರಾಲಿಂಪಿಕ್ಸ್ನ ಬಿಲ್ಲುಗಾರಿಕೆಯಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದ ಹರ್ವಿಂದರ್ ಸಿಂಗ್ | ಜನತಾ ನ್ಯೂಸ್
ನವದೆಹಲಿ : ಪ್ಯಾರಾಲಿಂಪಿಕ್ಸ್ನಲ್ಲಿ ಹರ್ವಿಂದರ್ ಸಿಂಗ್ ಅವರು ಬಿಲ್ಲುಗಾರಿಕೆಯಲ್ಲಿ ಭಾರತದ ಮೊದಲ ಪದಕವನ್ನು ಗಳಿಸುವ ಮೂಲಕ್ ಇತಿಹಾಸ ಸೃಷ್ಟಿಸಿದ್ದಾರೆ. ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷರ ವೈಯಕ್ತಿಕ ಬಿಲ್ಲುಗಾರಿಕೆ ಕಂಚಿನ ಪದಕಕ್ಕೆ ನಡೆದ ಸ್ಪರ್ಧೆಯಲ್ಲಿ ರೋಮಾಂಚಕ ಶೂಟ್-ಆಫ್ನಲ್ಲಿ ಕೊರಿಯಾದ ಕಿಮ್ ಮಿನ್ ಸು ಅವರನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊರಿಯಾ ವಿರುದ್ಧದ ಗೆಲುವು ಬಂದಿದ್ದರಿಂದ ಹರ್ವಿಂದರ್ ಸಿಂಗ್ ಅವರ ಈ ಸಾಧನೆಯು ಅತ್ಯಂತ ವಿಶೇಷವಾಗಿದೆ. ಸಿಂಗ್ ಅವರು ಕಿಮ್ಸ್ 8ರ ವಿರುದ್ಧ ಸೂಕ್ತವಾದ 10 ಶೂಟ್-ಆಫ್ ನೊಂದಿಗೆ ವಿಜಯದ ಮಾಲೆ ಧರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಯವರು ಈ ಕುರಿತು ಹರ್ಷ ವ್ಯಕ್ತಪಡಿಸಿದ್ದು, ಹರ್ವಿಂದರ್ ಸಿಂಗ್ ಅವರಿಂದ ಅತ್ಯುತ್ತಮ ಪ್ರದರ್ಶನವಾಗಿದೆ. ಅವರು ಉತ್ತಮ ಕೌಶಲ್ಯ ಮತ್ತು ದೃಡ ನಿರ್ಧಾರವನ್ನು ಪ್ರದರ್ಶಿಸಿದರು, ಇದರ ಪರಿಣಾಮವಾಗಿ ಅವರ ಪದಕ ಗೆಲುವಿಗೆ ಕಾರಣವಾಯಿತು. ಐತಿಹಾಸಿಕ ಕಂಚಿನ ಪದಕ ಗೆದ್ದ ಅವರಿಗೆ ಅಭಿನಂದನೆಗಳು. ಅವನ ಬಗ್ಗೆ ಹೆಮ್ಮೆ. ಮುಂಬರುವ ಸಮಯಗಳಲ್ಲಿ ಅವನಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ, ಎಂದು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿದ್ದಾರೆ.