ಕೃಷಿಕರ ಮಗಳಾದ ನನಗೆ ಕೃಷಿ ಮಂತ್ರಿಯಾಗೋ ಅವಕಾಶ ಸಿಕ್ಕಿದೆ: ಶೋಭಾ ಕರಂದ್ಲಾಜೆ | ಜನತಾ ನ್ಯೂಸ್
ಕಲಬುರಗಿ : ನಾನೊಬ್ಬಳ್ಳು ಕೃಷಿಕರ ಮಗಳಾಗಿದ್ದು, ನನಗೆ ಕೃಷಿ ಮಂತ್ರಿ ಆಗೋ ಅವಕಾಶ ಸಿಕ್ಕಿದೆ, ಈ ಖಾತೆ ಬಹಳ ಕಷ್ಟಕರವಾದ ಖಾತೆ ಆದರೂ ಕೃಷಿ ತಜ್ಞರ ಮಾಹಿತಿ ಆಧರಿಸಿ ಉತ್ತಮ ಕೆಲಸ ಮಾಡುತ್ತೇನೆ ಎಂದು ನೂತನ ಕೃಷಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ರೈತರು ಹಲವಾರು ವರ್ಷಗಳಿಂದ ಕಷ್ಟದಲ್ಲಿದ್ದಾರೆ, ಎಷ್ಟೇ ಕೃಷಿ ಮಾಡಿದ್ರೂ ನೆಮ್ಮದಿ ಅನಿಸಿಲ್ಲ. ಕೃಷಿ ಲಾಭದಾಯಕ ಅಲ್ಲ ಎನಿಸಿದೆ, ಹೀಗಾಗಿ ಕೃಷಿಕರ ಮಕ್ಕಳು ಕೆಲಸಕ್ಕಾಗಿ ವಲಸೆ ಹೋಗ್ತಿದ್ದಾರೆ ಕೃಷಿಕ, ಕೃಷಿಯಲ್ಲಿರುವ ಹಾಗೆ ಮಾಡೋದು ಸವಾಲಿನ ಕೆಲಸ. ಕೇಂದ್ರ ಸರ್ಕಾರದ ಕೃಷಿ ಸವಲತ್ತುಗಳನ್ನು ರೈತರು ಪಡೆದುಕೊಳ್ಳಬೇಕು. ಇಂದು ಸಮಾಜ ಮತ್ತೆ ಕೃಷಿ ಕಡೆ ಮುಖ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರದಲ್ಲಿನ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಕೃಷಿಗಾಗಿ 2021ರಲ್ಲಿ ಕೇಂದ್ರ ಬಜೆಟ್ನಲ್ಲಿ ಕೃಷಿಗಾಗಿ 123000 ಕೋಟಿ ರೂ. ನೀಡಿದೆ. ಇಂದು ಸಮಾಜ ಮತ್ತೆ ಕೃಷಿ ಕಡೆ ಮುಖ ಮಾಡ್ತಾದ್ದಾರೆ. 2014ರ ಚುನಾವಣೆಯಲ್ಲಿ ಯುಪಿಎ ಸರಕಾರದ ಬಜೆಟ್ನಲ್ಲಿ 23 ಸಾವಿರ ಕೋಟಿ ಮಾತ್ರ ಕೃಷಿಗಾಗಿ ಮೀಸಲಾಡಲಾಗಿತ್ತು, ಆದರೆ ಮೋದಿಜಿಯವರ ನೇತೃತ್ವದ ಸರ್ಕಾರ ಸಾವಿರದಿಂದ ಲಕ್ಷಕ್ಕೆ ಏರಿಸಿದೆ ಎಂದು ವಿವರಿಸಿದರು