12 ದಿನದಲ್ಲಿ ಹಸೆಮಣೆ ಏರಬೇಕಿದ್ದ ವಕೀಲ ದುರಂತ ಸಾವು! | ಜನತಾ ನ್ಯೂಸ್
ಕೊಡಗು : 12 ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವ ವಕೀಲ ಮಸಣ ಸೇರಿದ ಘಟನೆ ಮಡಿಕೇರಿಯ ಹೊರವಲಯದಲ್ಲಿ ನಡೆದಿದೆ.
ಮೈಸೂರು ನಗರದ ಗಾಂಧಿನಗರ ನಿವಾಸಿ ಜಯಲಕ್ಷ್ಮೀ ಮತ್ತು ಸುಬ್ರಹ್ಮಣಿಸ್ವಾಮಿ ದಂಪತಿ ಪುತ್ರ ವಿಶ್ವನಾಥ್(29) ಮೃತ ದುರ್ದೈವಿ. ಈತ ಮೈಸೂರಿನಲ್ಲಿ ವಕೀಲಿ ವೃತ್ತಿ ತರಬೇತಿ ಪಡೆಯುತ್ತಿದ್ದ. ಬೆಂಗಳೂರಿನ ಬಾಣಸವಾಡಿಯ ಯುವತಿ ಜತೆ ವಿಶ್ವನಾಥ್ ಮದುವೆ ನಿಶ್ಚಯವಾಗಿತ್ತು.
ಇದೇ ಸೆಪ್ಟೆಂಬರ್ 19 ರಂದು ವಿವಾಹ ಇದ್ದಿದ್ದರಿಂದ ಆಹ್ವಾನ ಪತ್ರಿಕೆ ನೀಡಲು ಮಡಿಕೇರಿಗೆ ವಿಶ್ವನಾಥ್ ಹಾಗೂ ದಿನೇಶ್ ಇಬ್ಬರು ಬೈಕ್ ನಲ್ಲಿ ಬಂದಿದ್ದರು, ಬೈಕ್ ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ವಿಶ್ವನಾಥ್ ಮತ್ತು ದಿನೇಶ್ ಇಬ್ಬರ ಮೇಲೂ ಮಡಿಕೇರಿಯ ಚೈನ್ಗೇಟ್ ಬಳಿ ಲಾರಿ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೋಷಕರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಮಡಿಕೇರಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಾಗಿದೆ.