ಕಾಂಗ್ರೆಸ್ ಗೆ ಬೆಂಬಲ ನೀಡಲು ದೇವೇಗೌಡರಿಗೆ ಜೊತೆ ಮಾತಾಡಿದ್ದೇನೆ: ಮಲ್ಲಿಕಾರ್ಜುನ ಖರ್ಗೆ | ಜನತಾ ನ್ಯೂಸ್
ಬೆಂಗಳೂರು : ಜಾತ್ಯತೀತ ಪಕ್ಷಗಳು ಒಂದಾಗಬೇಕೆಂಬ ದೃಷ್ಟಿಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಮನವಿ ಮಾಡಿದ್ದೇವೆ ಎಂದಿದ್ದಾರೆ.
ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ನಾವು 27 ಸ್ಥಾನ ಗೆದ್ದಿದ್ದೇವೆ. ಬಿಜೆಪಿಯವರು 23 ಗೆದ್ದಿದ್ದಾರೆ, ಅವರು ಬೇರೆ ಮಾರ್ಗದಲ್ಲಿ ಹೊರಟಿದ್ದಾರೆ. ದೇವೇಗೌಡರ ಜೊತೆ ನಾನು ಮಾತನಾಡಿದ್ದೇನೆ, ಜಾತ್ಯಾತೀತ ಪಕ್ಷಕ್ಕೆ ಬೆಂಬಲಕೊಡಿ ಎಂದಿದ್ದೇನೆ.ಅವರು ತಮ್ಮ ಪಕ್ಷದ ಮುಖಂಡರು ಹಾಗೂ ಕುಮಾರಸ್ವಾಮಿ ಜೊತೆ ಮಾತನಾಡ್ತೇನೆ ಎಂದಿದ್ದಾರೆ, ನಮಗೆ ವಿಶ್ವಾಸವಿದೆ, ಅವರು ಸಹಾಯ ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ಗೆ ಮೇಯರ್ ಸ್ಥಾನ ಕೊಡಬೇಕೆಂಬ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ ನೊಡೋಣ. ಕಲಬುರಗಿಯಲ್ಲಿ ಬಿಜೆಪಿ ವಿರುದ್ಧ ಜನರ ಮತದಾನವಿದೆ. ಜಾತ್ಯಾತೀತ ಮನೋಭಾವ ಹೊಂದಿರುವ ಕಾಂಗ್ರೆಸ್ ಹಾಗು ಜೆಡಿಎಸ್ ಗೆ ಪಾಲಿಕೆಯಲ್ಲಿ ಅಧಿಕಾರ ನಡೆಸಲು ಜನರು ಬೆಂಬಲಿಸಿದ್ದಾರೆ.
ಬಿಜೆಪಿಗೆ ಜನ ಬೆಂಬಲವಿಲ್ಲ, ಬಿಜೆಪಿಯು ಎಂಪಿ, ಎಂಎಲ್ ಸಿ ಮತಗಳನ್ನ ಪಡೆದು ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಹೊರಟಿದೆ. ಇದು ಜನರ ತೀರ್ಮಾನದ ವಿರುದ್ಧ ಎಂದು ಕಿಡಿ ಕಾರಿದರು. ದೇವೇಗೌಡರು ಹಿರಿಯರು, ಹಿರಿಯರು ಒಂದು ಮಾತು ಹೇಳಿರುವಾಗ ಏನಾಗುತ್ತೆ ಕಾದು ನೋಡ್ತೇನೆ ಎಂದರು.