ರಾಜ್ಯದಲ್ಲಿ ಇಂದು 801 ಪ್ರಕರಣ ಪತ್ತೆ, 15 ಸಾವು! | ಜನತಾ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 801 ಕೊರೋನಾ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 29,60,931ಕ್ಕೆ ಏರಿಕೆಯಾಗಿದೆ.
ಮಹಾಮಾರಿಗೆ ಇಂದು 15 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 37,487ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ವರದಿಗಳ ಪ್ರಕಾರ 1142 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2906746 ತಲುಪಿದೆ.
ಬೆಂಗಳೂರಿನಲ್ಲಿ ಇಂದು 207 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,41,170ಕ್ಕೆ ಏರಿಕೆಯಾಗಿದೆ. ಇಂದು ನಗರದಲ್ಲಿ 2 ಮಂದಿ ಸಾವನ್ನಪ್ಪಿದ್ದಾರೆ.
ಇನ್ನು ರಾಜ್ಯದಲ್ಲಿಂದು ಒಟ್ಟು ಸಕ್ರಿಯ ಪ್ರಕರಣ ಸಂಖ್ಯೆ 16672 ಇದೆ. ಪಾಸಿಟಿವಿಟಿ ದರ 0.67 % ಹಾಗೂ ಡೆತ್ ರೇಟ್ 1.87 % ಇದೆ.
ರಾಜ್ಯದ ನಾಲ್ಕು ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಗದಗ, ಹಾವೇರಿ, ರಾಮನಗರ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-1, ಬಳ್ಳಾರಿ-4, ಬೆಳಗಾವಿ-93, ಬೆಂಗಳೂರು ಗ್ರಾಮಾಂತರ-207, ಬೀದರ್-2, ಚಾಮರಾಜನಗರ-6, ಚಿಕ್ಕಬಳ್ಳಾಪುರ-0, ಚಿಕ್ಕಮಗಳೂರು-39, ಚಿತ್ರದುರ್ಗ-2, ದಕ್ಷಿಣ ಕನ್ನಡ-133, ದಾವಣಗೆರೆ-8, ಧಾರವಾಡ-1, ಕೊಪ್ಪಳ-1, ಮಂಡ್ಯ-12, ಮೈಸೂರು-47, ರಾಯಚೂರು-2, ರಾಮನಗರ-0, ಗದಗ-0, ಹಾಸನ-17, ಹಾವೇರಿ-0, ಕಲಬುರಗಿ-6, ಕೊಡಗು-59, ಕೋಲಾರ-2, ಶಿವಮೊಗ್ಗ-30, ತುಮಕೂರು-26, ಉಡುಪಿ-86, ಉತ್ತರ ಕನ್ನಡ-11, ವಿಜಯಪುರ-0, ಯಾದಗಿರಿ-0.